ಐದು ವರ್ಷಗಳ ಬಳಿಕ…………………….
ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು.
“ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು ಸುಶಾಂತ ಅಮೇರಿಕಾದಿಂದ ಐದು ಗಂಟೆಗೆಲ್ಲಾ ಬಂದು ಬಿಡುತ್ತಾರೆ.”
“ಕವಿತಾ, ನೀನು ಸ್ಕೂಲಿನಿಂದ ಯಾವಾಗ ಬರುತ್ತಿ?”,ಭರತ ಕೇಳಿದ.
“ನಾನು New Plymouth ಏರ್ ಪೋರ್ಟಿಗೆ ಹೋಗಿ ಅವರನ್ನು ಕಾರಿನಲ್ಲಿ ಕರೆದುಕೊಂಡೇ ಬರ್ತೀನಿ. ನೀನು ಬರುವಾಗ Child Care Centreಗೆ ಹೋಗಿ ಕೇಶವನನ್ನೂ ಕರೆದುಕೊಂಡೇ ಬಾ”, ಕವಿತಾ ಹೇಳಿದಳು.
…………………………………………….
ಕವಿತಾಳ ಜೊತೆಗೆ ಅವಳ ಮನೆ “ಸರೋಜಾ ಸದನ” ತಲುಪಿದ ತಕ್ಷಣ, ಪ್ರವಲ್ಲಿಕಾ ಭರತನನ್ನು ಪ್ರೀತಿಯಿಂದ ಆಲಂಗಿಸಿ, “ಅಣ್ಣಾ, ನಿನಗೆ ಒಂದು ಉಡುಗೊರೆ; ಕಣ್ಣು ಮುಚ್ಚಿ, ಕೈ ಚಾಚು!” ಎಂದಳು.
ಭರತನ ಚಾಚಿದ ಕೈಗೆ, ಪ್ರವಲ್ಲಿಕಾ ಚಿನ್ನದ ಎಳೆಗಳ ಒಂದು ರಾಖೀ ಕಟ್ಟಿ,
“ಈಗ ಕಣ್ಣು ತೆರೆ” ಎಂದಳು.
“ಪ್ರವಲ್ಲಿಕಾ ಥ್ಯಾಂಕ್ಸ್; ಆದರೆ ನನಗೆ ಮುಂದಿನ ರಾಖೀ ಹಬ್ಬಕ್ಕೆ ಚಿನ್ನದ ರಾಖೀ ಬೇಡ;ಚಿನ್ನದಂತಹ ಸೊಸೆ ಬೇಕು…..ಗೊತ್ತಾಯ್ತೇನೋ, ಸೋಮಾರಿ ಸುಶಾಂತ್!”ಎಂದು ಭರತ ಸುಶಾಂತನನ್ನು ಗೇಲಿ ಮಾಡಿದ.
ಸುಶಾಂತ ನಗುತ್ತ,”ನಾನೂ ಅದನ್ನೇ ಹೇಳ್ತಾ ಇದ್ದೇನೆ. ಮೇಡಮ್ ನನ್ನ ಮಾತನ್ನೇ ಕೇಳೋದಿಲ್ಲ” ಎಂದು ಪ್ರವಲ್ಲಿಕಾಳನ್ನು ಛೇಡಿಸಿದ.
“ಸುಶಾಂತ, ನಿನ್ನ ಜವಾಬುದಾರಿ ಹಾರಿಸಿಕೊಳ್ಳಬೇಡ”,ಎಂದು ನಕ್ಕ ಪ್ರವಲ್ಲಿಕಾ, “OK, I promise to present your daughter-in-law for the next ಹಬ್ಬಾ!”,ಎಂದು ಕಣ್ಣರಳಿಸಿ ಕವಿತಾಳಿಗೆ ಹೇಳಿದಳು.
‘ಸರೋಜಾ ಸದನ’ ಹರುಷದ ನಗುವಿನಿಂದ ತುಂಬಿತು.

11 thoughts on “ಕಥೆಯ ಕೊನೆಯ ಭಾಗ!”

  1. ಸುನಾಥರೇ, ಕಥೆಗೊಂದು ಮುಕ್ತಾಯ ಸೂಚಿಸಿದ್ದಕ್ಕೆ ಅಭಿನಂದನೆಗಳು.

    ಕಥೆಯ ಕೊನೆಗೆ, ಸುಶಾಂತ ಎಂಬ ಹೊಸ ಪಾತ್ರವನ್ನು ಬೇರೆ ತಂದಿದ್ದೀರಿ. ಅಥವಾ.. ಶಶಾಂಕ ಎನ್ನುವ ಬದಲು ಸುಶಾಂತ ಎಂದಿದ್ದೀರಿ?
    ಆದರೆ ’ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ’ ಎಂದು ಬರೆದಿದ್ದಕ್ಕೆ ಭರತ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡದಿದ್ದರೆ ಸಾಕು.

    ಕಥೆ ಕಟ್ಟುವ ಆಟದಲ್ಲಿ ಮೊದಲಿನಿಂದ ಕೊನೆವರೆಗೆ ಉತ್ಸಾಹದಿಂದ ಭಾಗವಹಿಸಿದ ನಿಮಗೂ ಮತ್ತು ಎಲ್ಲರಿಗೂ ಧನ್ಯವಾದಗಳು. ಕಥೆ ಬರೆಯುತ್ತೇವೆಂದು ಹೇಳಿ, ಬರೆಯದೆ ವಚನ ಭ್ರಷ್ಟರಾದವರಿಗೂ ………..:)

  2. “ಕಥೆ ಬರೆಯುತ್ತೇವೆಂದು ಹೇಳಿ, ವಚನ ಭ್ರಷ್ಟರಾದವರಿಗೂ…..”

    ಇದು ಮಾಲಾ ಮತ್ತು ಸುನಾಥರಿಗೆ ಹೇಳಿದ್ದಾ? ಅವ್ರು ತುಂಬಾ ಕಥೆ ಬರ್ದಿದ್ದಾರಲ್ಲ ???ಃ-))

  3. ಭಾಗ್ವತ್ರೆ, ನೀವು ಮಾತಿನ ಸಾಲು ಉದ್ಧರಿಸುವಾಗ ಒಂದು ಪದ ಬಿಟ್ಟಿದ್ದೇಕೆ? ಸಂದರ್ಭಕ್ಕೆ ಸರಿಯಾಗಿ ವಿವರಿಸಬೇಕೇ ಹೊರತು ನಿಮಗೆ ಬೇಕಾದಂತೆ ಅಲ್ಲ! ನಿಮ್ಮ ಉತ್ರ ತಪ್ಪು!! ಮೇಡಮ್ ನಿಮಗೆ ಮಾರ್ಕ್ಸ್ ಕೊಡೋದಿಲ್ಲಂತೆ.

  4. ತುಳಸಿಯಮ್ಮ ಎಲ್ಲಿ? ಇನ್ನೂ ಖೋಖೋ ಆಡ್ತಿದಾರಾ ಹೇಗೆ?

    ಸುನಾಥರೇ, ನಿಮಗೇನಾದರೂ ಮಾಹಿತಿ ಇದೆಯೇ?

  5. ಹತ್ತು ದಿನ ನೆಟ್-ಸನ್ಯಾಸದ ಮೇಲೆ ಇದ್ದೆ. ಹೀಗಾಗಿ ನನಗೆ ಯಾವುದರ ಮಾಹಿತಿಯೂ ಇಲ್ಲ. ಇವತ್ತು ನಿಮ್ಮಗಳ ದರ್ಶನವಾಗಿ ಖುಷಿಯಾಗಿದೆ. ಇನ್ನು ಶಶಾಂಕ ಅಥವಾ ಸುಶಾಂತರ ಬಗೆಗೆ ಹೇಳಬೇಕೆಂದರೆಃ- ನನಗೆ ಪಾತ್ರಗಳ ಬಗೆಗೆ ಇಷ್ಟು confuse ಆಗಹತ್ತಿದೆ ಅಂದರೆ ….ಏನೂ ಗೊತ್ತಾಗ್ತಾ ಇಲ್ಲ.

  6. ತುಳಸಿಯಮ್ಮ,

    ಕೊಟ್ಟ ಗಡುವು ಮುಗಿಯಿತು. ಈ ಕೂಡಲೇ ಬಂದು ಕಟಕಟೆಯಲ್ಲಿ ನಿಲ್ಲಬೇಕಾಗಿ ಕಳಕಳಿಯ ವಿನಂತಿ.

    ಬಹುಜನರ ಅಪೇಕ್ಷೆಯ ಮೇರೆಗೆ,
    ಭಾಗವತರು

  7. ಭಾಗವತರೇ, ಸಮಯಕ್ಕೆ ಸರಿಯಾಗಿ ಬಂದೂ ಕಟಕಟೆಯಲ್ಲಿ ನಿಲ್ಲಬೇಕೆಂದರೆ ಬರಬೇಕಾದರೂ ಯಾಕೆ? 🙂

  8. ಸುನಾಥರೇ,

    ನೆಟ್-ಸನ್ಯಾಸ ಯಾಕೆ? ಅಂದಹಾಗೆ, ನಿಮ್ಮ ನೆಟ್-ಸನ್ಯಾಸಾಶ್ರಮಕ್ಕೆ ಭಂಗ ತರಲು ರಂಭೆ-ಊರ್ವಶಿ-ಮೇನಕೆಯರೇನಾದರೂ ಪ್ರತ್ಯಕ್ಷರಾದರೆ, ಅವರಿಗೆ ನನ್ನ ವಿಳಾಸ ಕೊಡಿ ಃ-))

    ತುಳಸಿಯಮ್ಮ,
    ನೀವು ಸರಿಯಾದ ಸಮಯಕ್ಕೆ ಬಂದಿಲ್ಲದಿರುವುದರಿಂದ ಆ ಶಿಕ್ಷೆ..

  9. (೧) ರಂಭೆ, ಮೇನಕೆ ಇತ್ಯಾದಿ ಅಪ್ಸರೆಯರ ವಿಳಾಸಃ
    *C/O ಜಗಲಿ ಭಾಗವತ,
    ಭೂಮಂಡಲ.

    (೨) ಕಟಕಟೆಯಲ್ಲಿ ನಿಲ್ಲುವದೇಕೆಃ
    *ಕಿಟಿಕಿಟಿ ತಪ್ಪಿಸಿಕೊಳ್ಳಲು ಕಟಕಟೆಯಲ್ಲಿ ನಿಲ್ಲುವದೆ ಸರಿಯಾದ ಮಾರ್ಗ.

    (೩) ಸನ್ಯಾಸ ಲೀಲೆಃ
    * ಸಂಸಾರದ net ನಲ್ಲಿ ಸಿಲುಕಿದಾಗ ಇತರ netನಿಂದ ತಾತ್ಪೂರ್ತಿಕ ಸನ್ಯಾಸಗ್ರಹಣ ಮಾಡಲೇಬೇಕಾಗುವದಲ್ಲವೆ?

Leave a Reply to ಜ್ಯೋತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.