* ಸಾಹಿತ್ಯವೆಂದರೆ ಎದೆಯನ್ನು ಅಲುಗಿಸುವಂಥ ಮಾತು.

* ಜೀವನದ ಕೊಳೆ-ಕಲ್ಮಶಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಧ.

* ಅಸಾಧ್ಯವಾದ ವೈರಾಗ್ಯದ ಸೋಗಿಗಿಂತ ಸಾಧ್ಯವಾದ ಭೋಗದ ಸಾಧನೆ ಮೇಲೆಂದು ನಾವೆಲ್ಲ ಸ್ಪಷ್ಟವಾಗಿ ಅಂಗೀಕರಿಸಬೇಕು.

* ಸಂಸ್ಕೃತವು ಮಳೆಯ ಮೋಡ; ಕನ್ನಡವು ಅದನ್ನು ಹನಿಯಾಗಿಸಿ ನೆಲಕ್ಕೆ ಬರಮಾಡಿಕೊಳ್ಳುವ ತಂಗಾಳಿ.

* ಉತ್ತಮ ಜೀವನದಿಂದ ಉತ್ತಮ ಸಾಹಿತ್ಯ.

* ಮಿತತೆಯೇ ಬಲ ; ಬಾಹುಳ್ಯವೇ ದೌರ್ಬಲ್ಯ.

* ಬುದ್ಧಿ ಬ್ರಹ್ಮಗಿರಿ ; ಕಾವ್ಯ ಕಾವೇರಿ.

* ಸರಸ್ವತಿಯು ತಪಸ್ಸಿಲ್ಲದ ನೈವೇದ್ಯಕ್ಕೆ ಒಲಿಯುವಷ್ಟು ಸರಳೆಯಲ್ಲ.

* ಮನುಷ್ಯ ಸ್ವಭಾವ ಹಾಲು. ಜಗತ್ತು ಹುಳಿಮಜ್ಜಿಗೆ.

* ಬ್ರಹ್ಮಪ್ರಾಪ್ತಿಗೆ ಜಗತ್ತು ಸಾಧನ.

* ಸಂತೋಷವು ಭಗವಧ್ಬಕ್ತಿಯ ಒಂದು ಲಕ್ಷಣ.

* ಧರ್ಮದ ಒಂದು ಮುಖ್ಯರೂಪ ದೇಶಸೇವೆ.

* ಪ್ರಜಾರಾಜ್ಯಕ್ಕಿರುವ ಮೊದಲನೆಯ ಶತ್ರು ಪ್ರಜೆಯ ಅಶಿಕ್ಷೆ.

* ಸಂಕಟದಿಂದಲೇ ಮಂಗಳಸ್ಮರಣೆ.

* ಯಮನಿಗೆ ಊಟವಿಡುವವನು ಕಾಮ. ಕಾಮನಿಗೆ ಲೋಕದಲ್ಲಿ ಎಡೆಬಡಿಸಿಕೊಡುವವನು ಯಮ.

* ಪ್ರಣಯವು ಆರಂಭದಲ್ಲಿ ದ್ವೈತ ; ಸರಸಸಲ್ಲಾಪಗಳಲ್ಲಿ ವಿಶಿಷ್ಟಾದ್ವೈತ ; ಪ್ರಣಯ ಶಿಖರದಲ್ಲಿ ಅದ್ವೈತ.

* ಸಂಸಾರ ಸಾಗರವನ್ನು ದಾಟುವುದು ಹೇಗೆ? ನೀರನ್ನು ಸೋಕದೆಯೆ ಈಜಲಾಗುತ್ತದೆಯೇ?

* ಉತ್ಸವ ಗದ್ದಲ ಒಂದು ದಿನದ ಮೇಲ್ನೋಟಕ್ಕೆ ಚಿನ್ನ ; ವಿವೇಕ ವಿಚಕ್ಷಣೆ ಯಾವಾಗಲೂ ಚಿನ್ನ.

* ಜೀವನದ ಯಾವ ಭಾಗದಿಂದಲೂ ಧರ್ಮವನ್ನು ವಿನಾಯಿಸತಕ್ಕದ್ದಲ್ಲ.

* ಸಭ್ಯತೆ ಕಲೆ ; ಸಹವಾಸಾರ್ಹತೆ ಒಂದು ಕಲೆ ; ಮೈತ್ರೀ ಸಂಪಾದನೆ ಒಂದು ಕಲೆ ; ನಲ್ಮೆಯ ನೆರೆಹೊರೆತನ ಕಲೆ ; ರಾಷ್ಟ್ರಕಜೀವನ ಕಲೆ-ಅದು ಜೀವ ಸಂಸ್ಕಾರ ಕಲೆ, ಜೀವನ ಸಂವರ್ಧನ ಕಲೆ.

* ಕಕ್ಷಿಯಿಲ್ಲದ ರಾಜಕೀಯವು ಮಣ್ಣುಂಡೆ ; ಕಕ್ಷಿ ಪ್ರಬಲಿಸಿರುವ ರಾಜಕೀಯವು ಸೊಟ್ಟ ಕಟ್ಟಿಗೆ.

* ಕಾವ್ಯವು ಮನುಷ್ಯಕಾರ್ಯ ಆದರೂ ಅದು ರಹಸ್ಯ. ಏಕೆಂದರೆ ಮನುಷ್ಯನೇ ಒಂದು ರಹಸ್ಯ.
***

`ಡಾ||ಡಿ.ವಿ.ಗುಂಡಪ್ಪ – ಜೀವನ ಮತ್ತು ಸಾಧನೆ’ – ಲೇಖಕ ; ನೀಲತ್ತಹಳ್ಳಿ ಕಸ್ತೂರಿ, ಪ್ರಕಾಶನ ; ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (1988,1995)

2 thoughts on “ಡಿವಿಜಿಯವರ ಕೆಲವು ಸೂಕ್ತಿಗಳು”

Leave a Reply to kiran Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.