ಚಿತ್ರ : ಶರಪಂಜರ
ಗಾಯಕಿ – ಪಿ.ಸುಶೀಲ
ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ
ಸಂಗೀತ – ವಿಜಯ ಭಾಸ್ಕರ್

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ
ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ||

ಮುತ್ತುಗದ ಹೂವು ಮಲ್ಲಿಗೆಯೇ ?
ಅತ್ತಿಯ ಹಣ್ಣು ಅಂಜೂರವೇ?
ಚಿತ್ತೆಯ ಚಿಟ್ಟೆ ದುಂಬಿಯೇ?
ದತ್ತೂರಿ ಕಾಡಿಗೆ ಕಸ್ತೂರಿಯೇ? ||1||

ಕಾಜಾಣ ಕಾಗೆ ಕೋಗಿಲೆಯೇ?
ಬಣ್ಣದ ಕೆಂಬೂತ ಗಿರಿನವಿಲೇ?
ಕಾಡಿನಾ ಮರವೆಲ್ಲ ಶ್ರೀಗಂಧವೇ?
ನಾಡಿನ ಮಣ್ಣೆಲ್ಲಾ ಬಂಗಾರವೇ?||2||

ಬೆಟ್ಟದ ಕಾಳ್ಗಿಚ್ಚು ದೀಪವೇ?
ಬಿರುಗಾಳಿ ಕೆಂಧೂಳಿ ಧೂಪವೇ?
ಮೋಹದಾವೇಶ ಭಕ್ತಿಯೇ?
ಸವಿಯಾದುದೆಲ್ಲಾ ನೈವೇದ್ಯವೇ?||3||

One thought on “ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ”

Leave a Reply to tulasivana.com Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.