ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಮ್ಮ ಹಳ್ಳಿಯೂರಽ ನಮಗ ಪಾಡಽ- ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ! ೧ ಊರಮುಂದ ತಿಳಿನೀರಿನ ಹಳ್ಳಽ- ಬೇವು ಮಾವು ಹುಲಗಲ ಮರಚೆಳ್ಳಽ- ದಂಡಿಗುಂಟ ನೋಡು ನೆಳ್ಳಽ ನೆಳ್ಳಽ- ನೀರ ತರುವಾಗ ಗೆಣತ್ಯಾರ ಜೋಡಽ. . . ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ— ೨ ನಮ್ಮ ಹಳ್ಳ ಕಾಶಿಯ Read More

ಮಗುವಿಗೊಂದು ಮಗು!

ಕಳೆದ ಭಾನುವಾರ ಯಾವುದೋ ಶಾಪಿಂಗ್ ಮಾಲಿನಲ್ಲಿದ್ದೆವು. ಇದ್ದಕ್ಕಿದ್ದಂತೆ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಟ್ರೋಲರಿನಲ್ಲಿ ಮಲಗಿದ್ದ ಮಗುವೊಂದು ರಚ್ಚೆ ಹಿಡಿದು ಅಳತೊಡಗಿತು. ಅದರ ಜೊತೆಗೆ ಇದ್ದ ಹೆಂಗಸು ಅದನ್ನು ಸಮಾಧಾನಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು. ಆ ಮಗು ಅವಳ ಉಪಾಯಗಳೊಂದಕ್ಕೂ ಜಪ್ಪೆನ್ನದೆ ಉಸಿರುಗಟ್ಟಿಕೊಂಡು ಕಿರುಚಿ ಅಳುತ್ತಿತ್ತು. ಅತ್ತು ಕೆಂಪುಕೆಂಪಾಗಿದ್ದ ಆ ಮಗುವಿನ ಮುಖವನ್ನು ನೋಡಿದರೆ ಅದು ಹುಟ್ಟಿ Read More

ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಗಂಗಾವತರಣ ಗಾಯಕರು – ವಿಶ್ವೇಶ್, ಅಶ್ವಿನಿ ಆಲ್ಬಮ್ – ಘಮಘಮ ಹಾಡು ಕೇಳಿ ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ? ತುಳುಕ್ಯಾಡತಾವ ತೂಕಡಿಕಿ ಎವಿ ಅಪ್ಪತಾವ ಕಣ್ಣ ದುಡುಕಿ ಕನಸು ತೇಲಿ ಬರತಾವ ಹುಡುಕಿ|| ನೀ ಹೊರಟಿದ್ದೀಗ ಎಲ್ಲಿಗಿ ? ಚಿಕ್ಕಿ ತೋರಸ್ತಾವ ಚಾಚಿ Read More

ಅನಂತ ಪ್ರಣಯ – ಅಂಬಿಕಾತನಯದತ್ತ

ಕವಿತೆ :ಅನಂತ ಪ್ರಣಯ ಕವಿ : ಅಂಬಿಕಾತನಯದತ್ತ, ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ. ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ. ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ. ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು. Read More

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಳ ಮಹಿಮನ ದಿನದಲ್ಲಿ, ದಿತಿಜ ವಂಶದಲಿ ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ ಅತಿಶಯವಿರುತಿರೆ ಪಿತನ Read More