ಇದು ಉದಯ ಟಿವಿಯ “ನಗೆ ಸಖತ್ ಸವಾಲ್” ಕಾರ್ಯಕ್ರಮದಲ್ಲಿ ಕೇಳಿದ ನಗೆಹನಿ. ನನ್ನದೇ ಮಾತುಗಳಲ್ಲಿ,  🙂

ಸೀತೆ ಆಸೆ ಪಟ್ಟ ಚಿನ್ನದ ಜಿಂಕೆಯನ್ನು ಅರಸುತ್ತಾ ರಾಮ, ಅವನನ್ನು ಅನುಸರಿಸಿ ಲಕ್ಷ್ಮಣ ಮನೆಯಿಂದ ದೂರವಿರುತ್ತಾರೆ.  ಲಕ್ಷ್ಮಣ ತನ್ನ ಬಾಣದಿಂದ ರೇಖೆ ಎಳೆದು,  ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಬರದಂತೆ ಎಚ್ಚರಿಸಿ ಹೋಗಿರುತ್ತಾನೆ. ಕಪಟ ವೇಷದಿಂದ ಬಂದ ರಾವಣನ ಮೋಸವರಿಯದ ಸೀತೆ ರೇಖೆಯನ್ನು ದಾಟಿ, ರಾವಣನಿಗೆ ಭಿಕ್ಷೆ ನೀಡಲು ಹೋಗುತ್ತಾಳೆ. ಆಗ ರಾವಣ ತನ್ನ ಗಡ್ಡ,ಮೀಸೆಗಳನ್ನು ಕಿತ್ತೆಸೆದು, – “ಸೀತಾ, ಮೋಸ ಹೋದೆಯಾ? ನಾನು ರಾವಣ, ಸನ್ಯಾಸಿಯಲ್ಲ,”  ಎಂದು ಗಹಗಹಿಸಿ ನಗುತ್ತಾನೆ. ಆಗ ಅವಳು – “ನಾನೂ ಸೀತೆಯಲ್ಲ ಹೋಗ್. ಅವರ ಮನೆ ಕೆಲಸದವಳು.”  ಎಂದು ರಾವಣನಿಗೆ ಬೈದು ಒಳಗೆ ಹೋಗುತ್ತಾಳೆ!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.