ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ!

ರಚನೆ : ಗೋಪಾಲದಾಸರು ಹಾಡಿದವರು : ಮೈಸೂರು ರಾಮಚಂದ್ರ ಆಚಾರ್ಯ ವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ ವಾರಿಜಜಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅ-ಪ|| ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದಭಂಗ ಕರುಣಾಪಾಂಗ Read More

ಸೀತೆಯ ಭೂಮಿಜಾತೆಯ – Seeteya Bhoomi Jaateya

ವಿಜಯದಾಸರ ರಚನೆ ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪಲ್ಲವಿ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿದಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳು ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿಕಲ್ಯಾಣಿಯ||2|| ವಿಜಯವಿಠ್ಠಲನ್ನ ರಾಣಿಯ ಪಂ-|ಕಜಮಾಲೆ ಪಿಡಿದ ಪಾಣಿಯ ||ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |ಸುಜನವಂದಿತೆ ಅಹಿವೇಣಿಯ Read More

ಕೇಶವ ನಾಮ – ಕನಕದಾಸರು

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।।ಹಿಂದನೇಕ ಯೋನಿಗಳಲಿ । ಬಂದು ಬಂದು Read More

ಕೋತಿ ಬಂದದ ರಾವಣ ನೀ ಕೇಳು- ಕನಕದಾಸರು

ಕೋತಿ ಬಂದದ ರಾವಣ ನೀ ಕೇಳು ಸೀತೆಯ ವನದಲ್ಲಿ || ಪಲ್ಲವಿ|| ಗಿಡದಿಂದ ಗಿಡಕೆ ಹಾರತದ ಕೋತಿ ಬಲು ಗಡಿಬಿಡಿ ಮಾಡತದ ಹಿಡದೇನಂದರೆ ತಡಿ ತಡಿ ಅನುತದ ಬಿಡದೆ ರಾಮರ ಸ್ಮರಣೆ ಮಾಡುತದ ರಾಮನ ದೂತನು ಅನುತಾದ ||೧|| ಮಾತನಾಡುತಾದ ಬಂದಂಥ ಕೋತಿ ಸೀತಾ- ಅಂಥಾದ ಸೇತುವೆಗಟ್ಟಿ ಬರತಾನಂತದ ರಘುಪತಿ ದಶರಥ ಸುತ ಬರತಾನಂತ ವಾಯುಕುಮಾರನು Read More