ಇಷ್ಟು ದಿನ ಈ ವೈಕುಂಠ
ರಚನೆ : ಕನಕದಾಸರು ವಿದ್ಯಾಭೂಷಣ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ|| ಎಂಟು ಏಳನು ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ರಂಗಶಾಯಿ ||೧|| ವರ್ಜ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ Read More