ಚಿತ್ರ: ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ
ಗಾಯಕರು : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ
ಕಾಡು ನೋಡ ಹೋದೆ
ಕವಿತೆಯೊಡನೆ ಬಂದೆ
ಕವಿತೆಯೊಳಗೆ ಹೋಗಿ
ರಾಗದೊಡನೆ ಬಂದೆ
ಕಡಲ ನೋಡ ಹೋದೆ
ಮಾಯದ ಕಲೆಗೆ ಬಲೆಯ ತಂದೆ
ಬಲೆಯ ಬೀಸಿ ಕಾದು
ಮೋಹದ ತರುಣಿಯೊಡನೆ ಬಂದೆ
ಮಾತನಾಡಲು ಅವಳು ಮಾಯವಾದಳು |
ಹೂವಿನಲ್ಲಿ ಅವಿತೆ
ಬಿಡಲಿಲ್ಲ ನಿನ್ನ ಕವಿತೆ
ಸರಾಗವಾಗಿ ಹಾಡಿದೆ
ಪರಾಗವಾಗಿ ಹಾರಿದೆ
ಕಾವ್ಯವಾದೆ ನಾನು
ಬಿಡಲಿಲ್ಲ ನನ್ನ ನೀನು
ಸುನಾದವಾಗಿ ಕೂಗಿದೆ
ಪ್ರಯೋಗ ಮಾಡಿ ಹಾಡಿದೆ
ಕರೆದರೆ ಇಲ್ಲ ಎನ್ನದೆ ಬರುವ
ಬೆರೆತರೆ ಮಾತೇ ಆಡದೆ ಇರುವ
ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ
ಮಾತನಾಡಲು ಅವಳು ಮಾಯವಾದಳು |
ಮೋಡವಾಗಿ ಹೋದೆ
ಬಿಸಿಲಾಗಿ ನೀನು ಬಂದೆ
ಅದೇಕೆ ನೀರು ಮಾಡಿದೆ
ನನ್ನೇಕೆ ಸ್ನಾನ ಮಾಡಿದೆ?
ಅಲೆಗಳಾಗಿ ಹೋದೆ ನೀ
ಬೆಳದಿಂಗಳಾಗಿ ಬಂದೆ
ಅದೇನು ಮೋಡಿ ಮಾಡಿದೆ
ನಾನೇಕೆ ಮೇಲೆ ಹಾರಿದೆ
ಇಳಿದರೆ ಧಾರೆ ಆಗುವ ಹಿಮವೆ
ಸೆಳೆದರೆ ಪ್ರಣಯವಾಗುವ ಸುಮವೆ
ಚೆಲುವ ಬಾಲಿಕೆ ಕವಿಯ ಕಾಣಿಕೆ
ಮಾತನಾಡಲು ಅವಳು ಮಾಯವಾದಳು |
***