ರಚನೆ – ಪುರಂದರದಾಸರು
ಗಾಯಕಿಯರು – Bombay sisters

ಹಾಡು ಕೇಳಿ

ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ ||ಪ||
ಮಂದರಧರ ಗೋವಿಂದ ಮುಕುಂದನ ಸಂದರುಶನ ಒಂದಿದ್ದರೆ ಸಾಲದೇ ||ಅನು||

ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ
ತೋರುವ ದುರಿತದ ಬೆನ್ನ – ಭವಹಾರಿ ಕೃಪಾಂಬುಧಿ ಚೆನ್ನ ||
ಶ್ರೀರಮಣನ ಶ್ರೀ ಚರಣ ಸೇವಕರಿಗೆ
ಘೋರ ಯಮನು ಶರಣಾಗತನಲ್ಲವೇ || ೧ ||

ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದು
ದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||
ಹರಿಕೃಪೆಯವರಲ್ಲಿದ್ದ ಕಾರಣ
ದುರಿತವೆಲ್ಲ ಬಯಲಾದುದಲ್ಲವೇ || ೨ ||

ಸಿಂಗನ ಹೆಗಲೇರಿದಗೆ – ಕರಿಭಂಗವೇಕೆ ಮತ್ತವಗೆ |
ರಂಗನ ದಯವುಳ್ಳವಗೆ – ಭವಭಂಗಗಳೇತಕವಗೆ ||
ಮಂಗಳ ಮಹಿಮ ಪುರಂದರವಿಠಲನ
ಹಿಂಗದ ದಯೆವೊಂದಿದ್ದರೆ ಸಾಲದೇ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.