ರಚನೆ : ಜಗನ್ನಾಥ ದಾಸರು
ಗಾಯಕ : ವಿದ್ಯಾಭೂಷಣ
ಅಪಮೃತ್ಯು ಪರಿಹರಿಸೊ ಅನಿಲ ದೇವ
ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪಲ್ಲವಿ||
ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನುದಾಸೀನ ಮಾಡುವುದು
ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧||
ಜ್ಞಾನಾಯು ರೂಪಕನು ನೀನಹುದೊ
ವಾಣಿ ಪಂಚಾನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾನಿನ್ನ ಮೊರೆಹೊಕ್ಕೆ
ದಾನವಾರಣ್ಯ ತ್ರಿಶಾನು(?) ಸರ್ವದ ಎಮ್ಮ ||೨||
ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯನೆ
ವೇದವಾದೋದಿತ ಜಗನ್ನಾಥ ವಿಠಲನ
ಪಾದಭಜನೆಯನಿತ್ತು ಮೋದಕೊಡು ಸತತ ||೩||
**********************************
ಮಾನ್ಯರೇ, ರಾಮಕೃಷ್ಣರು ಮನೆಗೆ ಬಂದರು – ಈ ಹಾಡಿನ ಸಾಹಿತ್ಯವಿದ್ದರೆ ದಯವಿಟ್ಟು ಕೊಡಿ. (ಹಾಡಿನ ಲಿಂಕ್ ಸಹಿತ) ಮಗಳಿಗೆ ಶಾಲೆಯಲ್ಲಿ ಹಾಡಿಸಲು ಬೇಕಾಗಿದೆ. ಅವಸರವೇನಿಲ್ಲ.
ಧನ್ಯವಾದಗಳು.
ನಾನು ಕೇಳಿದ್ದ ಹಾಡು ಹಾಕಿದ್ದಕ್ಕೆ ತುಂಬ ಧನ್ಯವಾದಗಳು ನಿಮಗೇ.