ನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ: ಹಿಂಜುವುದು ನೇಸರನ ನೂರಾರು ಕಿರಣ ಜೇಡಬಲೆ ತುಂಬೆಲ್ಲ ಮುತ್ತಿನಾಭರಣ. ಒಂದೊಂದು Read More

ಗಗನದಿ ಸಾಗಿವೆ – ಚೆನ್ನವೀರ ಕಣವಿ

ಕವನ : ಗಗನದಿ ಸಾಗಿವೆ ಕವಿ : ಚೆನ್ನವೀರ ಕಣವಿ ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿದೆ ನೀರನು ಸುರಿದು; ಬರುವುವು, ಬಂದೇ ಬರುವುದು ನೋಡ ತುಂಬಿಸಿ, ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ ಹೆಸರಿಗು ಕಾಣದು ನೆಲವು. ನಸುಕೋ, ಸಂಜೆಯೊ, ಮಿಸುಕದು ಬೆಳಕು, Read More

ಒಂದು ಮುಂಜಾವು – ಚೆನ್ನವೀರ ಕಣವಿ

ಸಾಹಿತ್ಯ: ಚೆನ್ನವೀರ ಕಣವಿ ಸಂಗೀತ: ಸಿ. ಅಶ್ವಥ್ ಗಾಯಕಿ: ಬಿ.ಆರ್.ಛಾಯ ಆಲ್ಬಮ್ : ಭಾವಬಿಂದು ಹಾಡು ಕೇಳಿ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ; ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತ್ತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು Read More

ಹೂವು ಹೊರಳುವುವು ಸೂರ್ಯನ ಕಡೆಗೆ

ಕವಿ : ಚನ್ನವೀರ ಕಣವಿ ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ಗಿಡದಿಂದುರುವ ಎಲೆಗಳಿಗೂ ಮುದ Read More

ವಿಶ್ವಭಾರತಿಗೆ ಕನ್ನಡದಾರತಿ

ಕವಿ – ಚೆನ್ನವೀರ ಕಣವಿ ಹಾಡು ಕೇಳಿ ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ವಿಶ್ವವಿನೂತನ…………………….||೧|| ಗಂಗ, ಕದಂಬಾ, ರಾಷ್ಟ್ರಕೂಟ ಬಲ ಚಲುಕ್ಯ, ಹೊಯ್ಸಳ,ಬಲ್ಲಾಳ ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ. ವಿಶ್ವವಿನೂತನ…………………….||೨|| ಆಚಾರ್ಯತ್ರಯ ಮತಸಂಸ್ಥಾಪನ ಬಸವಾಲ್ಲಮ ಅನುಭಾವ ನಿಕೇತನ ಶರಣ, Read More