ಅನಂತ ಪ್ರಣಯ – ಅಂಬಿಕಾತನಯದತ್ತ

ಕವಿತೆ :ಅನಂತ ಪ್ರಣಯ ಕವಿ : ಅಂಬಿಕಾತನಯದತ್ತ, ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ. ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ. ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ. ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು. Read More

ಬೆಳಗು – ಅಂಬಿಕಾತನಯದತ್ತ

ಕವಿತೆ :ಬೆಳಗು ಕವಿ : ಅಂಬಿಕಾತನಯದತ್ತ, (೧) ಮೂಡಲ ಮನೆಯಾ ಮುತ್ತಿನ ನೀರಿನ ಎರಕವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ. (೨) ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. (೩) ಎಲೆಗಳ ಮೇಲೇ Read More

ಹುಬ್ಬಳ್ಳಿಯಾಂವಾ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಸಖೀಗೀತ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದು ಹೋದಾಂವಾ ||ಪಲ್ಲ|| ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬ ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ ಮಾತು ಮಾತಿಗೆ ನಕ್ಕು ನಗಿಸಿ ಆಡಿಸ್ಯಾಡಾಂವಾ ಏನೊ ಅಂದರ ಏನೊ ಕಟ್ಟಿ ಹಾsಡ ಹಾಡಾಂವಾ ಇನ್ನೂ ಯಾಕ. Read More

ಬಾರೊ ಸಾಧನಕೇರಿಗೆ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಗಾಯಕಿ – ಎಂ.ಡಿ.ಪಲ್ಲವಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ  ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಮಳೆಯು ಎಳೆಯುವ ತೇರಿಗೆ ಹಸಿರು ಏರಿದೆ ಏರಿಗೆ ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ ನಂದನದ ತುಣುಕೊಂದು ಬಿದ್ದಿದೆ ನೋಟ ಸೇರದು ಯಾರಿಗೆ? ಮಲೆಯ ಮೊಗವೆ ಹೊರಳಿದೆ ಕೋಕಿಲಕೆ ಸವಿ Read More