ಡಿವಿಜಿಯವರ ಕೆಲವು ಸೂಕ್ತಿಗಳು
* ಸಾಹಿತ್ಯವೆಂದರೆ ಎದೆಯನ್ನು ಅಲುಗಿಸುವಂಥ ಮಾತು. * ಜೀವನದ ಕೊಳೆ-ಕಲ್ಮಶಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಧ. * ಅಸಾಧ್ಯವಾದ ವೈರಾಗ್ಯದ ಸೋಗಿಗಿಂತ ಸಾಧ್ಯವಾದ ಭೋಗದ ಸಾಧನೆ ಮೇಲೆಂದು ನಾವೆಲ್ಲ ಸ್ಪಷ್ಟವಾಗಿ ಅಂಗೀಕರಿಸಬೇಕು. * ಸಂಸ್ಕೃತವು ಮಳೆಯ ಮೋಡ; ಕನ್ನಡವು ಅದನ್ನು ಹನಿಯಾಗಿಸಿ ನೆಲಕ್ಕೆ ಬರಮಾಡಿಕೊಳ್ಳುವ ತಂಗಾಳಿ. * ಉತ್ತಮ ಜೀವನದಿಂದ ಉತ್ತಮ ಸಾಹಿತ್ಯ. * ಮಿತತೆಯೇ ಬಲ Read More