ಆನಂದವಾದ ಮಿಠಾಯಿ – ಹೀಗೂ ಒಂದು ಹೊಳಹು

‘ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ’ ಗಾಯಕಿ ಎಂ. ಎಸ್. ಶೀಲಾರ ದನಿಯಲ್ಲಿ ಹಿಂದೆಂದೋ ಕೇಳಿದ್ದ ಈ ಹಾಡನ್ನು ಈಚೆಗೆ ಮತ್ತೊಮ್ಮೆ ಕೇಳಿದೆ. ಹಾಡನ್ನು ಕೇಳುತ್ತಿದ್ದಾಗ, ಈ ಕೀರ್ತನೆಯ ರಚನಕಾರರಾದ ಪುರಂದರದಾಸರು, ನುರಿತ ವ್ಯಾಪಾರಿಯೊಬ್ಬನು ತನ್ನ ಉತ್ಪನ್ನವನ್ನು ಪ್ರಚುರಪಡಿಸಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಉಳಿದೆಲ್ಲಾ ಸರಕುಗಳಿಗಿಂತ ತನ್ನದನ್ನು ಹೆಚ್ಚು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನೇ ಇಲ್ಲಿಯೂ ಅನುಸರಿಸಿದ್ದಾರಲ್ಲವೇ ಎನ್ನಿಸಿತು. Read More