ಚಿತ್ರ – ಶೃಂಗಾರ ಕಾವ್ಯ – ೧೯೯೩
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಲ್.ಎನ್. ಶಾಸ್ತ್ರಿ
ಶೃಂಗಾರ ಕಾವ್ಯ ಬರೆದನು
ಸಂಗೀತ ಸಾರ ಸುರಿದನು
ಉಸಿರ ಹಿಡಿದ
ತಂತಿ ಕಡಿದ
ಇನ್ನು ಮೌನ ಗಾನವೇ |
ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದ
ಕಣ್ಣೇ ತೆಗೆದ
ಇನ್ನು ಶೂನ್ಯ ಗಾನವೇ ||೧||
ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ಕಡೆದ
ಭಯವ ಸುರಿದ
ಇನ್ನು ಶೋಕ ಗಾನವೇ ||೨||
***
ಹದಿಮೂರ್ ವರ್ಷಾ ಆತೇನ್ರಿ ಈ ಹಾಡ್ ಬರದೂ, ಹಂಸಣ್ಣನಿಗೆ ಜಿಂದಾಬಾದ್!
ತ್ರಿವೇಣಿಯವರೇ,
ನೀವು ಎಲ್ಲಿಂದ ಹೆಕ್ಕಿ ತರತೀರಾ ಈ ಎಲ್ಲಾ ಹಾಡುಗಳು !
ಒಂದೊಂದು ಒಂದು ಭಾವನೆಯ ಅಲೆ ಎಬ್ಬಿಸುತ್ತವೆ..
ಕಾಳಣ್ಣಾ, ಹಂಸಣ್ಣನಿಗೆ ನಂದೂ ಒಂದು ಜಿಂದಾಬಾದ್ ನಿಮ್ಮ ಜೊತೆಗೆ 🙂
ವೇಣಿ, “ಕಾಡುವ ಹಾಡುಗಳು” ಅಂತನೇ ಒಂದು ವಿಭಾಗ ಮಾಡಿಬಿಡು, ಚೆನ್ನಾಗಿರತ್ತೆ.
ತುಂಂಂಂಂಂಂಂಂಂಂಬಾ ಭಾವನಾತ್ಮಕವಾಗಿದೆ. ಹಂಸಣ್ಣ ಆಲ್ವೇಸ ಗ್ರೇಟ್…