ಸುದ್ದಿ ತಿಳಿದು ಬೆಂಗಳೂರಿಂದ ರಾಜೀವ, ಆಕಾಶ, ಜೆನ್ನಿ, ಹ್ಯಾರಿ, ಕೇಶವ ಮತ್ತವನ ಸಂಸಾರ, ಎಲ್ಲರೂ ಹಳ್ಳಿಗೆ ಬಂದಿಳಿದರು. ಬಹಳಷ್ಟು ಚರ್ಚೆಗಳ ಬಳಿಕ ಹ್ಯಾರಿ ತಾತನ ಸಂಸ್ಕಾರ ಮಾಡುವುದೆ ಸೂಕ್ತವೆಂದು ಎಲ್ಲರಿಗೂ ತೋಚಿತು, ಆದರೆ ಆತನಿಗೆ ಉಪನಯನವಾಗಿಲ್ಲ ಎನ್ನುವುದನ್ನು ಶಾರದಮ್ಮ ಸೂಚಿಸಿದಾಗ ರಾಜೀವ ತಾನು ಮಾಡುವುದಾಗಿ ಮುಂದೆ ನಿಂತ. ಎಲ್ಲರ ಸಮ್ಮತಿಯಿತ್ತು, ಧಾರಿಣಿಯ ಗೈರುಹಾಜರಿಯ ನೋವಿನ ಜೊತೆಗೆ.

ದುಃಖದಿಂದ ತತ್ತರಿಸುತ್ತಿದ್ದ ಶಾರದಮ್ಮನವರಿಗೆ ಬಲವಂತದಿಂದ ಸ್ವಲ್ಪ ಹಾಲು ಕುಡಿಸಿ ಮಲಗಿಸಿ ಹೊರ ಬಂದ ಸರೋಜ ಹಾಲಿನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯನ್ನು ನೋಡಿ ಸ್ಥಂಭೀಭೂತರಾಗಿ ನಿಂತುಬಿಟ್ಟರು.
`ನನ್ನ ಮಗ ಭರತ…!’ ಮನಸ್ಸು ಗುಣು ಗುಣಿಸಿತು ತುಟಿ ಒಡೆದು ಆಡಲಿಲ್ಲ. `ಏನಾಯ್ತೇ ಸರೋಜಾ…’ ಕೇಶವಚಿಕ್ಕಪ್ಪ ತಲೆ ಸುತ್ತಿ ನೆಲಕ್ಕೆ ಬೀಳುತ್ತಿದ್ದ ತಮ್ಮ ಪತ್ನಿಯನ್ನು ಹಿಡಿದುಕೊಳ್ಳುತ್ತಾ ನುಡಿದರು.

ಹೊಸರೂಪಿನ ಭರತ ಖಾನನನ್ನು ನೋಡಿದೊಡನೆ ಶಾರದಮ್ಮ ವ್ಯಗ್ರರಾದರು. “ನೀನೇ ನನ್ನ ಕುಂಕುಮ ಅಳಿಸಿದ ನೀಚ, ರಾಕ್ಷಸ… ಬರಬೇಡ ಇಲ್ಲಿಗೆ… ಹೋಗು… ದೂರ ಹೋಗು…” ಎಂದೆಲ್ಲ ಅರಚಾಡಿ ನೊಂದುಕೊಂಡರು. ಅವರನ್ನು ಸಮಾಧಾನಿಸಲು ಸಾಕುಬೇಕಾಯಿತು. ಎಲ್ಲರೂ ಸ್ವಲ್ಪ ಶಾಂತರಾದಾಗ ಭರತ ಖಾನ ತನ್ನ ಹೊಸ ರೂಪದ ಹಿಂದಿನ ರಹಸ್ಯ, ತನಗೆ ಭಾರತ ಸರಕಾರ ಕೊಟ್ಟಿರುವ ಹೊಸ ಜವಾಬ್ದಾರಿಯ ಹುದ್ದೆ ಮತ್ತು ತಾನದನ್ನು ಭಾರತೀಯನಾಗಿ ಸ್ವೀಕರಿಸಿ, ಭಾರತೀಯನಾಗಿ ನಿಭಾಯಿಸುವ ನಿರ್ಧಾರಗಳನ್ನು ತಿಳಿಸಿದಾಗ ರಾಜೀವ, ಆಕಾಶ್, ಪ್ರವಲ್ಲಿಕಾ ತುಸು ನಿರಾಳಗೊಂಡರು.

ಇತ್ತ ಧಾರಿಣಿಯನ್ನು ಕಾಯುತ್ತಿರುವ ಟಿಮ್ ಮತ್ತವನ ಕೂಟಕ್ಕೆ ಅತ್ತ ಕಡೆ ಜೋಯಿಯಿಂದ ಒತ್ತಡ ಹೆಚ್ಚುತ್ತಿತ್ತು. ಇತ್ತ ಕಡೆ ಯಾವುದೇ ರೀತಿಯ ಮುನ್ನಡೆ ಸಾಧಿಸಲಾಗದೆ ಟಿಮ್ ಒದ್ದಾಡುತ್ತಿದ್ದ. ಅದೇ ಸಮಯಕ್ಕೆ `ಶಶ್’ ಶಾರದಮ್ಮನ ದೇಹಾಂತದ ಸುದ್ದಿಯನ್ನು ತಂದೊಪ್ಪಿಸಿದ, ಟಿಮ್ ಮುಂದೆ ಧಾರಿಣಿಗೆ. ಧಾರಿಣಿಯನ್ನು ಈ ನೆಪದಲ್ಲಾದರೂ ಬಿಡಿಸಬಹುದು ಅನ್ನುವುದು ಆತನ ಹಂಚಿಕೆ. ಆತ ಅಂದುಕೊಂಡಂತೆಯೇ ಧಾರಿಣಿ ಅಧೀರಳಾಗಿ, ಮೂರ್ಛೆತಪ್ಪಿ ಬಿದ್ದು, ಮತ್ತೆ ಎದ್ದು ಗೋಳಾಡತೊಡಗಿದಳು. ಟಿಮ್ ಗೊಂದಲಗೊಂಡ. ಏನು ಮಾಡುವುದೆಂದು ತಿಳಿಯದೆ, ಕೂಡಲೇ ಜೋಯಿಗೆ ಕರೆಮಾಡಿದ.
***** ***** *****
ಮೊದಲಿಗೆ ಕಿರುಚಾಡಿದ ಜೋಯಿ, ನಂತರ ಯಾರಾದರೂ ನಂಬಿಕಸ್ತರ ಜೊತೆ ಧಾರಿಣಿಯನ್ನು ಹಳ್ಳಿಗೆ ಕಳಿಸಿ ಕ್ರಿಮೇಷನ್ ಮುಗಿದೊಡನೆ ಮತ್ತೆ ಬೆಂಗಳೂರಿಗೆ ಕರೆಸುವ ಏರ್ಪಾಡು ಮಾಡಲು ಆಜ್ಞೆ ಮಾಡಿದ. ಟಿಮ್’ಗೆ ಈ ಕೆಲಸಕ್ಕೆ ಶಶ್’ಗಿಂತ ಉತ್ತಮ ವ್ಯಕ್ತಿ ಇಲ್ಲವೆನಿಸಿತು. ಆತನ ಜೊತೆಗೆ ಧಾರಿಣಿಯನ್ನು ಕಳಿಸಲು ಮುಂದಾದ. ಅತ್ತೂ ಅತ್ತೂ ಸುಸ್ತಾಗಿದ್ದ ಧಾರಿಣಿಗೆ ಯಾವುದೇ ಪ್ರತಿಕ್ರಿಯೆ ತೋರಿಸುವ ಹುಮ್ಮಸ್ಸೂ ಇಲ್ಲವಾಗಿತ್ತು. ನಿರ್ಜೀವ ದೇಹದಂತೆ ಶಶ್ ಜೊತೆ ಅವನೇ ತಂದ ಟ್ಯಾಕ್ಸಿಯಲ್ಲಿ ಹಳ್ಳಿ ಕಡೆ ಹೊರಟಳು.

ಹಳ್ಳಿಗೆ ಇನ್ನೂ ಸ್ವಲ್ಪ ದೂರ ಇದೆ ಅನ್ನುವಾಗಲೇ ಶಶಾಂಕ ಟ್ಯಾಕ್ಸಿ ಬಿಟ್ಟ. ರಸ್ತೆ ಬದಿಯ ಮರದ ನೆರಳಲ್ಲಿ ಒಂದಿಷ್ಟು ಕೂತು, ಧಾರಿಣಿಗೆ ತನ್ನ ನಾಟಕದ ಕಥೆಯನ್ನು ವಿವರಿಸಿದ. ಅಮ್ಮನಿಗೆ ಏನೂ ಆಗಿಲ್ಲವೆಂದೂ ಇವಳನ್ನು ಬಿಡಿಸಲು ತನ್ನ ನಾಟಕವೆಂದೂ ತಿಳಿಸಿದ. ಇಷ್ಟು ದಿನ ಬಂಧಿಯಾಗಿದ್ದ ಧಾರಿಣಿ ಇದನ್ನು ನಂಬಲು ಕೆಲ ಕ್ಷಣಗಳೇ ಹಿಡಿದವು. ಆದರೂ ಮನಸ್ಸನ್ನು ಯಾವುದೋ ಬಾಧೆ ಹಿಂಡುತ್ತಿತ್ತು. “ಥ್ಯಾಂಕ್ಸ್” ಎಂದಷ್ಟೇ ಅಂದಳು. ಹಳ್ಳಿಗೆ ಹೋಗುವ ಬಸ್ಸು ಬಂದಾಗ, ಕೈತೋರಿಸಿ ಇಬ್ಬರೂ ಬಸ್ಸೇರಿ ಮೌನವಾಗಿ ಮನೆ ಸೇರಿದರು.

ಚಾವಡಿಯಲ್ಲಿ ಯಾವುದೋ ಚರ್ಚೆಯಲ್ಲಿ ಮುಳುಗಿದ್ದ ರಾಜೀವ, ಆಕಾಶ, ಭರತರನ್ನು ಕಂಡ ಧಾರಿಣಿಗೆ ಏನೋ ನಡೆದಿದೆ ಅನ್ನುವ ಅರಿವು ಮೂಡಿತು. “ಅಕ್ಕಾ” ಅನ್ನುತ್ತಾ ಪ್ರವಲ್ಲಿಕಾ ಓಡಿ ಬಂದಾಗಲೇ ಉಳಿದವರೆಲ್ಲರೂ ಇವರಿಬ್ಬರತ್ತ ಗಮನ ಹರಿಸಿದರು. ತಂಗಿಯ ಹಿಂದೆಯೇ ಓಡಿ ಬಂದ ಬರಿಹಣೆಯ ಅಮ್ಮನನ್ನು ಕಂಡಾಗ ಧಾರಿಣಿಯ ಹೃದಯ ಕುಸಿದು ಬಿತ್ತು. “ಅಪ್ಪಾ..” ಎಂದದ್ದಷ್ಟೇ, ಅವಳ ಸ್ವರ ಅಡಗಿಕೂತಿತು. ಇಬ್ಬರನ್ನು ಸಮಾಧಾನ ಮಾಡುವ ಸರದಿ ಪ್ರವಲ್ಲಿಕಾ ಸರೋಜಮ್ಮನವರಿಗೆ. ಇವೆಲ್ಲದರ ನಡುವೆಯೇ ಶಶಾಂಕ ಟಿಮ್ ಮತ್ತವನ ಕಾರ್ಯಾಚರಣೆಯ ವಿವರ ನೀಡಿದ್ದು ರಾಜೀವ ಮತ್ತು ಆಕಾಶ್ ಇಬ್ಬರಿಗೂ ಪರಿಸ್ಥಿತಿಯ ಹಿನ್ನೆಲೆ ಒದಗಿಸಿತು. ಭರತ ಇದನ್ನು ತಾನು ಸಂಭಾಳಿಸುವುದಾಗಿ ಭರವಸೆ ನೀಡಿದ. ಭರತನ ಪ್ರತಿಯೊಂದು ಚರ್ಯೆಯನ್ನೂ ಗಮನಿಸುತ್ತಿದ್ದರು ಸರೋಜಮ್ಮ. ಆದರೆ ಅದು ಬೇರೆ ಯಾರ ದೃಷ್ಟಿಗೂ ಬಿದ್ದಿರಲಿಲ್ಲ.

ಶಾಸ್ತ್ರಿಗಳ ಸಂಸ್ಕಾರಗಳೆಲ್ಲ ಮುಗಿದವು. ಮುಂದೇನು ಎನ್ನುವ ಪ್ರಶ್ನೆ ಎಲ್ಲರೆದುರು ಮತ್ತೊಮ್ಮೆ ಎದ್ದು ನಿಂತಿತು.

***** ***** *****

3 thoughts on “ಭಾಗ – 18”

  1. ಶಾಸ್ತ್ರಿಗಳ ವೈಕುಂಟಸಮಾರಾಧನೆಗೆಂದು ಹಳ್ಳಿಗೆ ಬಂದಿದ್ದ ರಾಜೀವನ ತಾಯಿ ಇಂದಿರಮ್ಮ ಬೀಗಿತ್ತಿಯನ್ನು ಸಮಾಧಾನ ಪಡಿಸುವುದರಲ್ಲಿ ಒಂದಿಷ್ಟು ಯಶಸ್ವಿ ಯಾಗಿದ್ದರು ರಾಜೀವನ ತಂಗಿ ಕವಿತಾಳೂ ಮನೆಯಲ್ಲಿ ಓಡಾಡಿಕೊಂಡು ಅದೂ ಇದೂ ಕೆಲಸ ಮಾಡಿಕೊಂಡು ಇದ್ದಳು ಈ ಕಾರಣಕ್ಕಾಗಿಯೇ ಅವರು ವಾಪಸ್ಸು ಹೊರಟಾಗ ಆಕಾಶ ಅವ್ರನ್ನು ಇನ್ನೊಂದಷ್ಟು ದಿನ ಹಳ್ಳಿಯಲ್ಲೇ ಇರುವಂತೆ ಹೇಳಿ ಬಲವಂತವಾಗಿ ಒಪ್ಪಿಸಿದ
    ಕವಿತಾಗೆ ಇದರಿಂದ ಖುಷಿಯಾಯಿತುಅವಳು ಕದ್ದು ಕದ್ದೂ ಭರತನನ್ನು ನೋಡುತ್ತಿರುವುದು ಯಾರ ಗಮನಕ್ಕೂ ಬಂದಂತಿಲ್ಲ…ಆದರೆ ಭರತ ನ ಕಣ್ಣು ಮೂಗೂ ತಲೆ ಎಲ್ಲಾ ಚುರುಕು…ಪ್ರವಲ್ಲಿಕಾ ಬಿಳಿ ಪಾರಿವಾಳ….ಕವಿತಾ ಜಿಂಕೆ ಕಣ್ಣಿನ ಜೇನಿನ ದನಿಯ ಚದುರೆ… ಭರತ ಗೊಂದಲದಲ್ಲಿ ಬಿದ್ದ….

  2. ಳ್ಲಿಯ ಪಂದಿತರು ಕೊಡುತ್ತಿರುವ ಹಸಿರು ಔಶಧಿಯಿಂದ ಹ್ಯಾರಿಯ ಆರೋಗ್ಯಕೊಂಚ ಕೊಂಚವಾಗಿ

    ಸುಧಾರಿಸುತ್ತಿದೆ ಮೊದಲೇ ಭಾರತೀಯ ಪರಿಸರಕ್ಕೆ ಅಪರಿಚಿತಳಾದ ಜೆನಿಗೆ ಅವಳು ಈ ಮನೆಗೆ ಬಂದ

    ಮೇಲೆ ಓತಪ್ರೇತವಾಗಿ ನಡೆದು ಹೋದ ಘಟನೆಗಳಿಂದ ಗಲಿಬಿಲಿಗೊಂಡಿರುವಾಗ ನೆಮ್ಮದಿ ತಂದಿರುವುದು
    ಮಗನ ಆರೋಗ್ಯ ಸುಧಾರಿಸುತ್ತಿರುವ ಸಂಗತಿ ಜೆನಿಗೆ ಮಡಿ ಹುಡಿ ಗೊತ್ತಿಲ್ಲ ಶಾರದಮ್ಮನವರಿಗೆ ಇಂಗ್ಲಿಶ್

    ಬರುವುದಿಲ್ಲ ಪ್ರವಲ್ಲಿಕಾಗೆ ತನ್ನದೇ ಪ್ರಪಂಚ ಅದರಲ್ಲಿ ಅವಳು ಭರತ ಇಬ್ಬರೇ…ಧಾರಿಣಿಗೆ ಇನ್ನೂ

    ಅಪ್ಪನನ್ನು ಮರೆಯಲಾಗುತ್ತಿಲ್ಲ…ಅಕಾಶ ವಾಪಸ್ಸು ಬೆಂಗಳೂರಿಗೆ ಹೋಗಿಯಾಗಿದೆ
    ಒಂಟಿಯಾಗಿ ಕಂಗೆಟ್ಟು ಕೂತಿದ್ದ ಜೆನಿಗೆ ಆಸರೆಯಾಗಿ ತಂಪೆರೆದವಳು ಕವಿತಾ…

  3. ಅಮೆರಿಕದ ಎಲ್ಲ ವಾಣಿಜ್ಯಪತ್ರಿಕೆಗಳ ಮುಖಪುಟದಲ್ಲಿ ಅಂದು ರಾರಾಜಿಸುತ್ತಿದ್ದ ತಲೆಬರಹವೆಂದರೆಃ “Fox swallows Galaxy”. ಇವೆರಡೂ ಅಮೇರಿಕದ ಅತಿ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು. ಒಂದನ್ನೊಂದು ನುಂಗಲು ಇವೆರಡರಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ Galaxyಯನ್ನು ನುಂಗುವದರಲ್ಲಿ Fox ಯಶಸ್ವಿಯಾಯಿತು. ವ್ಯವಹಾರ ಹಸ್ತಾಂತರದ ಮೊದಲು, Galaxy ತಾನು ಒಳನಾಡು ಹಾಗು ಹೊರನಾಡುಗಳಲ್ಲಿ ನಡೆಯಿಸುತ್ತಿದ್ದ ತನ್ನೆಲ್ಲ ಕುಟಿಲ ಕಾರಸ್ಥಾನಗಳನ್ನು ತಕ್ಷಣವೇ ನಿಲ್ಲಿಸಿ ಬಿಟ್ಟಿತು. ಇದರ ಪರಿಣಾಮವೆಂದರೆ, ಜೊಯಿ ಮತ್ತು ಟಿಮ್ ಇವರು Operation Bangaloreಗೆ ಮಂಗಳ ಹಾಡಿದ್ದು. ಶಶಾಂಕ ನಿಟ್ಟುಸಿರು ಬಿಟ್ಟು, ಧಾರಿಣಿಗೆ ಈ ಸಿಹಿ ಸುದ್ದಿ ತಿಳಿಸಿದ. ಧಾರಿಣಿ, ಪ್ರವಲ್ಲಿಕಾ, ರಾಜೀವ, ಶಾರದಮ್ಮ ಮತ್ತೆಲ್ಲರೂ ಖುಷಿಯಾದರು. ಶಾಸ್ತ್ರಿಗಳ ಮರಣದಿಂದ ಶೋಕಗ್ರಸ್ತವಾದ ಆ ಮನೆಯಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನೆಲೆಸಿತು. ಪ್ರವಲ್ಲಿಕಾಳಿಗೂ ಸಹ ತನ್ನ ಹಾಗೂ ಭರತನ ಪ್ರಣಯವನ್ನು ಬೇಗನೇ ಪರಿಣಯದಲ್ಲಿ ಮುಗಿಸಲು ಇದು ಒಳ್ಳೆಯ ಕಾಲವೆನಿಸಿತು. ಆದರೆ! ಆದರೆ……….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.