ಕಥೆ ಬಗ್ಗೆ ಇಲ್ಲಿ ಮಾತಾಡೋಣ.
ಕಥೆಯ ಬೆಳವಣಿಗೆಯನ್ನು ಚರ್ಚಿಸಲು ಇದ್ದ ಆ ದಾರ ಹನುಮನ ಬಾಲದಂತೆ ಉದ್ದವಾಗಿರುವುದರಿಂದ ಈ ಹೊಸ ಎಳೆಯ ಅವತಾರ. ಕಥೆ ಬಗ್ಗೆ ಮಾತಾಡುವುದಲ್ಲದೆ, ಕಥೆಗಾರರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಥ(ದ)ನ ಮುಂದುವರೆಯಲಿ.
ಕನ್ನಡಮ್ಮನ ದೇವಾಲಯ
ಕಥೆಯ ಬೆಳವಣಿಗೆಯನ್ನು ಚರ್ಚಿಸಲು ಇದ್ದ ಆ ದಾರ ಹನುಮನ ಬಾಲದಂತೆ ಉದ್ದವಾಗಿರುವುದರಿಂದ ಈ ಹೊಸ ಎಳೆಯ ಅವತಾರ. ಕಥೆ ಬಗ್ಗೆ ಮಾತಾಡುವುದಲ್ಲದೆ, ಕಥೆಗಾರರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಥ(ದ)ನ ಮುಂದುವರೆಯಲಿ.
ಮನೋಶಾಸ್ತ್ರ ಹಾಗು ಮಾನವಶಾಸ್ತ್ರ ಇವು ಕವಿತಾಳ ಮೆಚ್ಚಿನ ವಿಷಯಗಳು.ಅಲ್ಲದೆ ಅವಳು ಒಂದು ರೀತಿಯ ಸ್ತ್ರೀಸ್ವಾತಂತ್ರ್ಯವಾದಿ. ಕಾಲೇಜಿನಲ್ಲಿ ಜರುಗುವ ಚರ್ಚಾಕೂಟಗಳಲ್ಲಿ, ಮಾನವ ಸಮಾಜ ಪ್ರಾರಂಭವಾದ ಗಳಿಗೆಯಿಂದ ಯಾವ ಯಾವ ವಿಧಾನಗಳಲ್ಲಿ ಸ್ತ್ರೀಯ ಮೇಲೆ ಅನ್ಯಾಯ ನಡೆದಿದೆ ಎನ್ನುವದನ್ನು ಅವಳು ತರ್ಕಬದ್ಧವಾಗಿ ವಿವರಿಸುತ್ತಿದ್ದಳು. ಕೇವಲ ಸಮಾಜವಷ್ಟೇ ಅಲ್ಲ, ನಿಸರ್ಗವೂ ಸಹ ಮಹಿಳೆಗೆ ಅನ್ಯಾಯ ಮಾಡಿದೆ; ಶಿಶುವಿನ ಗರ್ಭಧಾರಣೆಯು ಸ್ತ್ರೀಯ Read More
ಅಮ್ಮನನ್ನು ನೋಡುವ ತವಕದಲ್ಲಿ ಹಳ್ಳಿ ಬಿಟ್ಟಾಗ ಭರತನ ಮನದ ತುಂಬಾ ಸರೋಜಮ್ಮನವರ ರೂಪವೇ ತುಂಬಿ ಹೋಗಿತ್ತು ಇಹದ ಅರಿವೇ ಇರಲಿಲ್ಲದವನಿಗೆ ಅವನ ಕಾರಿನ ಹಿಂಬದಿಯ ಸೀಟಿನಲ್ಲಿ ಯಾರಿದ್ದಾರೆ ಎಂಬ ಗಮನ ಹೋಗುವುದು ಹೇಗೆ? ಕೇಶವನ ಮನೆಯನ್ನು ಹಿಂಭಾಗದಿಂದ ಹೊಕ್ಕು ಕಿಟಕಿಂದಲೇ ಸರೋಜಮ್ಮನ ದರ್ಶನ ಮಾಡಿಕೊಂಡು ಭಾರವಾದ ಮನಸ್ಸಿನಿಂದ ಹೊರಬಂದು ಕಾರು ಓಡಿಸತೊಡಗಿದ ಭರತ ಖಾನ ಕಾರು Read More
ಭರತ ಪತ್ರವನ್ನು ಓದಿ ಮುಗಿಸಿದ. ಅವನನ್ನು ಬಹುದಿನಗಳಿಂದ ಕಾಡುತ್ತಿದ್ದ “ನಾನಾರು?” ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಿತ್ತು. ಸಮೀಯುಲ್ಲಾ ತನ್ನ ಹೆತ್ತ ತಂದೆ ಇರಲಾರರು ಎಂಬ ಅನುಮಾನ ಅವನಿಗೆ ಮೊದಲೇ ಇತ್ತು. ಸಮೀಯುಲ್ಲಾರ ಸಾತ್ವಿಕ ಸ್ವಭಾವಕ್ಕೂ, ತನ್ನಲ್ಲಿದ್ದ ಉಗ್ರ ಗುಣಕ್ಕೂ ಹೋಲಿಕೆಯೇ ಇಲ್ಲದ್ದು ಅವನ ಗಮನಕ್ಕೂ ಎಷ್ಟೋ ಬಾರಿ ಬಂದಿತ್ತು. ಯಾರನ್ನೂ ನೋಯಿಸೆನೆನ್ನುವ ಸಮೀಯುಲ್ಲಾರನ್ನು ನೋಡಿದಾಗ Read More
ರಾತ್ರೆಯ ನೀರವತೆಯಲ್ಲಿ ಸರೋಜಮ್ಮ ಸೂರು ದಿಟ್ಟಿಸುತ್ತಿದ್ದರು. ಕೇಶವ ಬೆಂಗಳೂರಿಗೆ ತೆರಳಿದ್ದರು. ಆಕಾಶ್, ರಾಜೀವ, ಭರತ, ಶಶಾಂಕ ಹೊರಗೆ ಜಗಲಿಯಲ್ಲಿ ಇನ್ನೂ ಹರಟೆ ಹೊಡೆಯುತ್ತಿದ್ದರು. ಟಿಮ್ ಮತ್ತು ಜೋಯಿ ತಮ್ಮ ಕಾರ್ಯಾಚರಣೆ ಮುಗಿಸಿದ ಸುದ್ದಿ ತಿಳಿಸಲು ಬಂದಿದ್ದ ಶಶಾಂಕನನ್ನು ಧಾರಿಣಿ ಒತ್ತಾಯದಿಂದ ಇಲ್ಲಿ ನಿಲ್ಲಿಸಿಕೊಂಡಿದ್ದಳು. ರಾಜೀವನ ಇರವು ಜೆನ್ನಿಗೆ ಖುಷಿ ಕೊಟ್ಟಿತ್ತು, ಒಬ್ಬ ಸ್ನೇಹಿತನಾದರೂ ಜೊತೆಗಿರುವ ಸಮಾಧಾನ Read More