ಕಾಲದ ಗಂಟೆ

ಚಿತ್ರಕವನದಿಂದ ತುಂಬಿದ ಶಾಂತಿಯ ಕೆಣಕುವ ಹಾಗೆ ಮನಸನು ತಲ್ಲಣ ಗೊಳಿಸುವ ಹಾಗೆ ಎಲ್ಲಿಂದಲೇ ತೂರಿ ಬಂದಿತು ಶಬ್ದ ಕಲಕೇ ಹೋಯಿತು ದಿವ್ಯ ನಿಶ್ಯಬ್ದ ! ಅಂತರಾಳದ ಆಳಕ್ಕಿಳಿದು ಮೊಳಗುತ್ತಲಿದೆ ಕಾಲದ ಕೂಗು ಹನಿಹನಿ ಆಯುವು ಸೋರುವ ಮುನ್ನ ಜನ್ಮ ಸಾರ್ಥಕಗೊಳಿಸಿಕೊ ಚಿನ್ನ ! ಆಯಿತೇ ಮಗನಿಗೆ ವಿದ್ಯಾಭ್ಯಾಸ ? ಆದೀತು ಮಗಳ ಮದುವೆಯೂ ನಿರಾಯಾಸ ತೀರಿತು Read More

ರಕ್ತ ಕಣ್ಣೀರು

ಚಿತ್ರಕವನ ಬ್ಲಾಗ್‍ನಿಂದ ಬಡವನಲ್ಲ ಸ್ವಾಮಿ ನಾನು ; ಒಂದು ಕಾಲದ ಶ್ರೀಮಂತ ಹತ್ತೂರ ಯಜಮಾನ, ಹೆಸರು ಲಕ್ಷ್ಮೀಕಾಂತ ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು ಏನಾಯ್ತೋ, Read More

ಮುಡಿಗೇರಲಿ ಸಾಧನೆ

ಚಿತ್ರಕವನದಿಂದ ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು? ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು ಹೆಣ್ಣಾಗಿ ಹುಟ್ಟಿದ್ದೊಂದೇ Read More

ಹಸುರಲ್ಲಿ ಹೋಲಿ

ಚಿತ್ರಕವನದಿಂದ ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು! ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ ನಿಸರ್ಗವೇ ವಹಿಸಿಹುದು ಜಗದ ಕಾರುಬಾರು ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ! ದೇವಲೋಕದಿಂದ ಜಾರಿ ಬಿದ್ದಿಹುದಲ್ಲ ಯಾರು ಕೊಟ್ಟಿರಬಹುದು ಮುನಿದು ಶಾಪ? ಬರಡು ಬಾಳನು ಹರಸಿ ಸ್ವರ್ಗಮಾಡಿದೆ ಚೆಲುವು ಒಂದೂ ಕುಂದಿರದ Read More

ಹರಿ ನಿನ್ನೊಲುಮೆಯು ಆಗುವ ತನಕ

ರಚನೆ – ಪುರಂದರದಾಸರು ಗಾಯಕ – ಶಶಿಧರ್ ಕೋಟೆ ಹಾಡು ಕೇಳಿ ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು ಮರಳಿ ಮರಳಿ ತಾ ಪಡೆಯದ ಭಾಗ್ಯ ಮರುಗಿದರೆ ತನಗಾದೀತೆ ||ಪ|| ದೂರು ಬರುವ ನಂಬಿಕೆಯನು ಕೊಟ್ಟರೆ ದುರ್ಜನ ಬರುವುದು ತಪ್ಪೀತೆ ದೂರ ನಿಂತು ಮೊರೆ ಇಟ್ಟು ಕೂಗಿದರೆ ಚೋರರಿಗೆ ದಯ ಪುಟ್ಟೀತೆ ಜಾರ Read More