ಆನಂದವಾದ ಮಿಠಾಯಿ – ಹೀಗೂ ಒಂದು ಹೊಳಹು

‘ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ’ ಗಾಯಕಿ ಎಂ. ಎಸ್. ಶೀಲಾರ ದನಿಯಲ್ಲಿ ಹಿಂದೆಂದೋ ಕೇಳಿದ್ದ ಈ ಹಾಡನ್ನು ಈಚೆಗೆ ಮತ್ತೊಮ್ಮೆ ಕೇಳಿದೆ. ಹಾಡನ್ನು ಕೇಳುತ್ತಿದ್ದಾಗ, ಈ ಕೀರ್ತನೆಯ ರಚನಕಾರರಾದ ಪುರಂದರದಾಸರು, ನುರಿತ ವ್ಯಾಪಾರಿಯೊಬ್ಬನು ತನ್ನ ಉತ್ಪನ್ನವನ್ನು ಪ್ರಚುರಪಡಿಸಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಉಳಿದೆಲ್ಲಾ ಸರಕುಗಳಿಗಿಂತ ತನ್ನದನ್ನು ಹೆಚ್ಚು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನೇ ಇಲ್ಲಿಯೂ ಅನುಸರಿಸಿದ್ದಾರಲ್ಲವೇ ಎನ್ನಿಸಿತು. Read More

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ

ರಚನೆ : ಪುರಂದರದಾಸರು ಗಾಯಕ – ವಿದ್ಯಾಭೂಷಣ ಹಾಡು ಕೇಳಿ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ|| ಆನೆ ಕುದುರೆ ಒಂಟೆ ಲೊಳಲೊಟ್ಟೆ ಸೇನೆ ಭಂಡಾರವು ಲೊಳಲೊಟ್ಟೆ ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ ||೧|| ಮುತ್ತು ಮಾಣಿಕ್ಯ ಲೊಳಲೊಟ್ಟೆ ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ ಸುತ್ತಗಲ ಕೋಟೆ ಲೊಳಲೊಟ್ಟೆ ಮತ್ತೆ ಉತ್ತಮಪ್ರಭುತ್ವ ಲೊಳಲೊಟ್ಟೆ Read More

ಕೊಡು ಬೇಗ ದಿವ್ಯಮತಿ

ಹಾಡು ಕೇಳಿ ಕೊಡು ಬೇಗ ದಿವ್ಯಮತಿ ಸರಸ್ವತಿ ||ಪಲ್ಲವಿ|| ಮೃಡ ಹರಿ ಹಯಮುಖರೊಡೆಯಳೆ ನಿನ್ನ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ||ಅನು ಪಲ್ಲವಿ|| ಇಂದಿರಾ ರಮಣನ ಹಿರಿಯ ಸೊಸೆಯು ನೀನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ||೧|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||೨|| ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ Read More

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?

ಪುತ್ತೂರು ನರಸಿಂಹನಾಯಕರ ದನಿಯಲ್ಲಿ ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ಮೂಡಲಗಿರಿಯಲಿ ನಿಂದ ಮುದ್ದು ವೆಂಕಟಪತಿ Read More

ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ; ವಿನೋದವಿರದು ನನ್ನಲಿ. ಕಿವಿಯನೇಕೆ ತೆರೆಯುತಿರುವೆ? ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ! ನಲ್ಲೆ ಬಂದು ತುಟಿಗೆ ಕೊಳಲ ನೊತ್ತಿ ಉಸುರ ಬಿಟ್ಟಳು; ತನ್ನ ಒಲವಿನಿಂದ್ರಧನುವ ಹರಿದು ಇಳಿದು ಬಿಟ್ಟಳು; ಬಣ್ಣ ಬಣ್ಣದೆನಿತೋ ಹಾಡ ನಿಲ್ಲಿ ಚೆಲ್ಲಿ ಕೊಟ್ಟಳು. ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು; ಇಂದು ಮೌನದುಸುಬಿನಲ್ಲಿ Read More