ರಚನೆ – ವಾದಿರಾಜರು
ಗಾಯನ – ಪ೦ಡಿತ್ ವೆಂಕಟೇಶ್ ಕುಮಾರ್

ಹಾಡು ಕೇಳಿ :-

ಒಂದು ಬಾರಿ ಸ್ಮರಣೆ ಸಾಲದೇ?
ಆನಂದತೀರ್ಥರ, ಪೂರ್ಣಪ್ರಜ್ಞರ, ಸರ್ವಜ್ಞರಾಯರ, ಮಧ್ವರಾಯರ ||ಪ||

ಹಿಂದನೇಕ ಜನ್ಮದಲ್ಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶನ ಪಾದವನ್ನು ಹೊಂದಬೇಕೆಂಬುವರಿಗೆ || 1 ||

ಆರು ಮಂದಿ ವೈರಿಗಳನು ಸೇರಲೀಸದಂತೆ ನೂಕಿ
ಧೀರನಾದ ಹರಿಯ ಪಾದ ಸೇರಬೇಕೆಂಬುವರಿಗೆ || 2 ||

ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದ ಭಕುತಿ ಬೇಕೆಂಬುವರಿಗೆ || 3 ||

ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆ-
-ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ|| 4 ||

ಹೀನಬುದ್ದಿಯಿಂದ ಶ್ರೀ ಹಯವದನನ್ನು ಜರಿದು
ತಾನು ಬದುಕಲಾರದಿರಲು ತೋರಿಕೊಟ್ಟ ಮಧ್ವಮುನಿಯ|| 5 ||

***********************************************

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.