ರಚನೆ : ಕನಕದಾಸರು
ಬಂದೇವಯ್ಯಾ ಗೋವಿಂದ ಶೆಟ್ಟಿ
ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ||
ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು
ಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲ
ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧||
ಒಡೆದ ಮಡಕೆ ತಂದು ಅರೆದು ನಾಮವ ಮಾಡಿ
ಕೊಡುವೆ ನೀ ಕಾಸಿಗೆ ಒಂದೊಂದಾಗಿ
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||೨||
ಶೇಷಗಿರಿಯಲಿ ವಾಸವಾಗಿಹ ಶೆಟ್ಟಿ
ದೇಶದೇಶದೊಳು ಹೆಸರಾದ ಶೆಟ್ಟಿ
ಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ
ಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ ||೩||
ಸತ್ಯ …. ಶೆಟ್ಟಿಯ ಗುಣ ( ವ್ಯಾಪಾರ)