ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂

“ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ.

ನವೀನ ಗಾದೆಗಳು

* ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ.

* ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು.

* ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು.

* ಬಂದದ್ದೆಲ್ಲ ಬರಲಿ, ಅಟಾಮಿಕ್ ಭಯ ಇರಲಿ.

* ಸಂಕಟ ಬಂದಾಗ ವೆಂಕಾಟಾ! ಅಣೂ ತೆಗಿ.

* ಹೋದರೊಂದು ಅಣು! ಆದರೊಂದು ಜಯ!

* ಅಣುಸಿಡಿಸೋ ವಿಜ್ಞಾನಕ್ಕಿಂತ ಅರಿತು ನುಡಿಯೋ ಅಜ್ಞಾನವೇ ಲೇಸು

* ಕುಂಬಳಕಾಯಿ ಕಳ್ಳ ಅಂದರೆ, ಅಣು ಬುಟ್ಟಿ ತಗೊಂಡು ಬಂದ.

* ನಾಗ ಸಾಕಿ ನಾಶ ಮಾಡೋದೆ.

* ಪರಪಂಚ ಗೆದ್ದವರನ್ನ ಪರಮಾಣುವಿನಲ್ಲಿ ಹೊಡೆದರು.

* ಕೊಂಕಳಲ್ಲಿ ಪರಮಾಣು ! ಕೈಯಲ್ಲಿ ಶರಣಾಗತಿ ಷರತ್ತು.

* ಮೇಲಿನೋರಿಗೆ ಚೆಲ್ಲಾಟಂ ; ಕೆಳಗಿರೋರಿಗೆ ಕೊಲ್ಲಾಟಂ.

* ಬೆಂಗಳೂರಿಗೆ ಬಂದರೆ ತಂಗಳೇ ಗತಿ

* ತೀರ್ಥ ಕೊಟ್ಟರೆ ಥೈರಾಯಿಡ್, ಮಂಗಳಾರತಿ ಹಿಡಿದರೆ ಮೆನಿಂಜೈಟಿಸ್.

* ಉದರ ನಿಮಿತ್ತಂ ಬಹುಕೃತ ಮೋಸಂ.

* ಕ್ಯೂ ನಿಲ್ಲಿಸೋಕೆ ಕೂಸೇ ಇಲ್ಲ, ಕುಲಾವಿಗೆ ಪಂಜಾಬಿನ ಉಲ್ಲು ಕೊಡಿ ಅಂದಳಂತೆ.

* ತಲ್ಲಣಿಸದಿರು ಕಂಡ್ಯ ತಾಳಿ ಕಟ್ಟಿದವನ ಕಂಡು.

* ಬೆರಳು ತೋರಿಸು ಅಂದರೆ ಕೊರಳನ್ನೇ ಕೊಡುತ್ತಾನೆ.

* ತಾಳಿದವನಿಗೆ ತಾಳಿಯೇ ನಾಸ್ತಿ.

* ಹತ್ತು ಮಕ್ಕಳ ಜನಕ, ಇನ್ನೆಲ್ಲಿಯ ನರಕ?

* ‘ಪಿಲ್’ ನುಂಗಿ ಸಾಯದವ, ‘ಬಿಲ್’ ನುಂಗಿ ಸತ್ತಾನೇ?

* ಪಾಲಿಗೆ ಬಂದವನೇ ಪುರುಷಾಮೃಗ.

* ಗುರುವಿಗೆ ಬೇಕಾದ್ದು ಉರು ಮಂತ್ರ.

* ಸೀರೆ ನೋಡಿ ಸೀಟ್ ಹಾಕಿ. ವಾಲೆ ನೋಡಿ ಮಾಲೆ ಹಾಕಿ.

* ಥಾನುಂಟೋ, ಮೂರು ಮೊಳವುಂಟೋ.

* ಪಾಪಿ ಬಸ್ಸಿಗೆ ಹೋದರೆ, ಮೊಣಕಾಲು ಮಡಿಸಲೂ ಜಾಗವಿಲ್ಲ.

* ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ.

* ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ.

* ತುಂಗೆ ನೀರಾದರೇನು? ಗಂಗೆ ನೀರಾದರೇನು? ಇಂಗು ಹಾಕಿದರೆ ಸಾರು ಚೆನ್ನ.

* ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು.

* ಹೊಳೆ ದಾಟಿದ ಮೇಲೆ ಅಂಬಿಗ ಬಿಲ್ ಕಳಿಸಿದ.

* ಲೇ ಅಂತ ಅವಳನ್ನು ಕರೆಯುವುದಕ್ಕೆ ಮೊದಲೇ, ಲೋ ಅಂತ ಅವಳೇ ಪ್ರಾರಂಭಿಸಿಬಿಟ್ಟಳು.

* ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.

* ಇಲ್ಲದ ಗಣೇಶನಿಗೆ ಬೆಲ್ಲದ ನೈವೇದ್ಯ
  ಇರೋ ಗಣೇಶನಿಗೆ ಇರೋದರಲ್ಲೇ ನೈವೇದ್ಯ.

*  ಮೂರು ಕೋರ್ಟ್ ಹತ್ತಿ ಮೂರು ನಾಮ ಮೆತ್ತಿಸಿಕೊಂಡ.

*       *      *      *       *    *     *       *

10 thoughts on “ನಾ.ಕಸ್ತೂರಿ – ನವೀನ ಗಾದೆಗಳು”

  1. ಶ್ರೀ ತ್ರೀ ಅವರೆ,
    ನಾ ಕಸ್ತೂರಿ ಅವರು ನಾ-ಸ್ಟ್ರಡಾಮಸ್ ಅಂತೆಯೇ ಭವಿಷ್ಯ ನುಡಿಯೋರಾಗಿರ್ಬೇಕು.

    ಪ್ರತಿಯೊಂದು ಕೂಡ ಸಮಕಾಲೀನ ಮೌಲ್ಯ ಹೊಂದಿದೆ.
    “ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ ” ಅಂತ ನಮ್ಮ ಬ್ಯುರೋಗೆ ನೇರವಾಗಿ ಬಾಣ ಬಿಟ್ಟಂತಿದೆಯಲ್ಲಾ :))

  2. ಅನ್ವೇಷಿಗಳೇ, ನನಗೂ ಆ ಗಾದೆ ಬರೆಯುವಾಗ ಬೊಗಳೆ ರಗಳೆ ನೆನಪು ಬಂದಿತು 🙂
    ನೀವು ಬೊಗಳೋದು, ಬರೆಯೋದು ಮಾಡುವುದರಿಂದ ಅದು ನಿಮಗಲ್ಲಾ ಬಿಡಿ 🙂

  3. ಹಿಹೀ..

    >ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು
    ಇದೇನು ಗಾದೆ?

  4. ಶಿವು, ಕರ್ನಾಟಕದ ಜನರ ಹಿಂದಿ ವ್ಯಾಮೋಹವನ್ನು ಕುರಿತು ಕಸ್ತೂರಿಯವರು ಈ ಗಾದೆ ಮಾಡಿದಂತಿದೆ 🙂 ಹಿಂದಿ ಕಲಿಯವದವರು ಯಾವುದಕ್ಕೂ ಉಪಯೋಗವಿಲ್ಲದವರು ಎನ್ನುವ ಭಾವನೆ ಆಗಿತ್ತೇನೋ. ಅನ್ನಿಸಿಕೊಳ್ಳುವುದು ಅನ್ನುವುದಕ್ಕೆ ಬೈಸಿಕೊಳ್ಳುವುದು ಎಂದೂ ಅರ್ಥವಿದೆ.

  5. ನಕ್ಕು, ನಕ್ಕು ಹೊಟ್ಟೆ ಹುಣ್ಣಾಯ್ತು. ಡಾಕ್ಟ್ರ ಹತ್ರ ಹೋಪುಕೆ ದುಡ್ಡು ಕೊಡಿಃ-))

    ‘ಅನರ್ಥ ಕೋಶ’ವನ್ನು ೫ ವರ್ಷದ ಹಿಂದೆಯೆ ಖರೀದಿಸಿದ್ದೆ. ಆದರೆ ಇನ್ನೂ ಓದಿ ಮುಗಿಸ್ಲಿಕ್ಕೆ ಆಗಿಲ್ಲಃ-)

  6. ಜಗಲಿ ಭಾಗವತರೇ, ಡಾಕ್ಟ್ರ ಹತ್ರ ಈಗಲೇ ಹೋಪುದು ಬೇಡ. ಬೀಚಿ ಅನರ್ಥಕೋಶವನ್ನೂ ಓದಿಕೊಂಡು ಕೊನೆಗೆ ಹೋಗಿ 🙂

  7. ಹಾಗೇ ಮಾಡಿ ಭಾಗವತರೇ.  ಒಂದು ಹೊಟ್ಟೆ ತುಂಬಿಸುವುದೇ ಕಷ್ಟ, ಎರಡು ಹೊಟ್ಟೆ ಪಾಡು ನಿಮ್ಮದು! 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.