ರಚನೆ : ಶ್ರೀಪಾದರಾಜರು
ಗಾಯಕ : ವಿದ್ಯಾಭೂಷಣ
ಕಾಡ ಬೆಳದಿಂಗಳು ಈ ಸಂಸಾರ
ಕತ್ತಲೆ ಬೆಳದಿಂಗಳು ||ಪಲ್ಲವಿ||
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಂದು ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತ ಮೇಲಕೆ ಎತ್ತುವರು ||೧||
ಏರುವ ದಂಡಿಗೆ ನೂರಾಳು ಮಂದಿಯು
ಮೂರು ದಿನದ ಭಾಗ್ಯ ಝಣಝಣವು
ಮೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನ್ನೆ ಸರಿ ಎಂಬರಯ್ಯ ||೨||