ನಾನೂ ಸೀತೆಯಲ್ಲ – ನಗೆಹನಿ

ಇದು ಉದಯ ಟಿವಿಯ “ನಗೆ ಸಖತ್ ಸವಾಲ್” ಕಾರ್ಯಕ್ರಮದಲ್ಲಿ ಕೇಳಿದ ನಗೆಹನಿ. ನನ್ನದೇ ಮಾತುಗಳಲ್ಲಿ,  🙂 ಸೀತೆ ಆಸೆ ಪಟ್ಟ ಚಿನ್ನದ ಜಿಂಕೆಯನ್ನು ಅರಸುತ್ತಾ ರಾಮ, ಅವನನ್ನು ಅನುಸರಿಸಿ ಲಕ್ಷ್ಮಣ ಮನೆಯಿಂದ ದೂರವಿರುತ್ತಾರೆ.  ಲಕ್ಷ್ಮಣ ತನ್ನ ಬಾಣದಿಂದ ರೇಖೆ ಎಳೆದು,  ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಬರದಂತೆ ಎಚ್ಚರಿಸಿ ಹೋಗಿರುತ್ತಾನೆ. ಕಪಟ ವೇಷದಿಂದ ಬಂದ ರಾವಣನ ಮೋಸವರಿಯದ ಸೀತೆ ರೇಖೆಯನ್ನು ದಾಟಿ, ರಾವಣನಿಗೆ Read More

ಕಪ್ಪೇ ಚಿಪ್ಪು – ಚಿಪ್ಪೇ ಕಪ್ಪು

ನಮ್ಮೂರ ಕಡೆಗಿನ ಆಡುಭಾಷೆಯಲ್ಲಿ ಚಲಾವಣೆಯಲ್ಲಿ ಇರುವ ಒಂದು ಪದವಿದು.  “ಏನೂ ಸಿಗಲಿಲ್ಲ”,  ಪಟ್ಟ ಶ್ರಮವೆಲ್ಲಾ ವ್ಯರ್ಥವಾಯಿತು, ನಿಷ್ಫಲವಾಯಿತು… ಎಂಬುದನ್ನು ವ್ಯಂಗ್ಯವಾಗಿ ಸೂಚಿಸಲು “ನನಗೆ ಚಿಪ್ಪು ಸಿಕ್ಕಿತು”,  ” ಅವನನ್ನು ನಂಬಿಕೊಂಡರೆ ನಿನಗೆ ಚಿಪ್ಪೇ ಗತಿ” –  ಎನ್ನುವುದುಂಟು. “ಚಿಪ್ಪು” ಎಂದರೆ, ಎಲ್ಲರಿಗೂ ಗೊತ್ತಿರುವಂತೆ, ತೆಂಗಿನ ಕರಟಕ್ಕೊಂದು ಪರ್ಯಾಯ ಪದ.  ಯಾವುದೇ ಹಣ್ಣಿನ ಹೊರಪದರವಾದ ಸಿಪ್ಪೆಯನ್ನು ಚಿಪ್ಪು ಎನ್ನಬಹುದಾದರೂ, ತೆಂಗಿನಕಾಯಿಗೆ ಈ Read More

ವರ್ಷ ತೊಡಕಿಗೆ ಒಂದೆರಡು ಸಾಲು

 ಈ ಎರಡು ದಿನಗಳಲ್ಲಿ, ಪತ್ರಿಕೆ, ಟಿವಿ, ಶುಭಾಶಯ ಪತ್ರಗಳಲ್ಲಿ ಬಹಳ ಹೆಚ್ಚು ಸಲ ಕೇಳಿ ಬಂದಿರುವ ಪದಗಳೆಂದರೆ, ಸಿಹಿ-ಕಹಿ,ನೋವು-ನಲಿವು, ಬೇವು-ಬೆಲ್ಲ. ನಿಮ್ಮೆಲ್ಲರ ಮನೆಗಳಲ್ಲಿ ಯುಗಾದಿ ಹಬ್ಬ ಚೆನ್ನಾಗಿ ಆಚರಿಸಿದಿರಾ? ಸಿಹಿ ಅಡುಗೆ ಏನು ಮಾಡಿದ್ದಿರಿ? ನಮ್ಮನೆಯಲ್ಲಿ ಹೋಳಿಗೆ ಮಾಡಿದ್ದೆ. ಮಾಡಬೇಕೆನ್ನುವ ಯೋಚನೆ ಏನೂ ಇರಲಿಲ್ಲ. ಉದಯ ಟಿವಿಯಲ್ಲಿ ತಾರಾ ದಂಪತಿ ಶ್ರೀರಕ್ಷಾ ಮತ್ತು ಶಿವಕುಮಾರ್ ಬಂದಿದ್ದರು. ಶ್ರೀರಕ್ಷಾ ಹೋಳಿಗೆ ಮಾಡಿದರೆ, ಶಿವಕುಮಾರ್ ಪಲಾವ್ Read More

ರಾಮ ರಾಮ ಎಂಬೆರಡಕ್ಷರ

ರಾಗ – ಧನ್ಯಾಸಿ ತಾಳ – ಆದಿ ರಾಮ ರಾಮ ಎಂಬೆರಡಕ್ಷರ ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ|| ಹಾಲಾಹಲವನು ಪಾನವ ಮಾಡಿದ| ಫಾಲಲೋಚನನೆ ಬಲ್ಲವನು || ಆಲಾಪಿಸುತ ಶಿಲೆಯಾಗಿದ್ದ | ಬಾಲೆ ಅಹಲ್ಯೆಯ ಕೇಳೇನು ||೧|| ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ| ಕುಂಜರ ರವಿಸುತ ಬಲ್ಲವನು || ಎಂಜಲ ಫಲಗಳ ಹರಿಗರ್ಪಿಸಿದ | ಕಂಜಲೋಚನೆಯ Read More

ಕಿರುತೆರೆ – ಕಿರಿಕಿರಿ

“ಧಾರಾವಾಹಿ ನಿರ್ದೇಶಕರು, ಒಬ್ಬ ವ್ಯಕ್ತಿಗೆ ಕನಿಷ್ಠ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ”  –  (ಬೊ.ರ. ಬ್ಯುರೋ) ಎಂದೂ ಅಸತ್ಯವನ್ನೇ ಬೊಗಳುವ ಅಸತ್ಯಾನ್ವೇಷಿಗಳು ಈ ಬಾರಿ ಮಾತ್ರ ಅಪ್ಪಿತಪ್ಪಿ ಪರಮ ಸತ್ಯದ ಸುದ್ದಿಯನ್ನೇ ತಮ್ಮ Read More