ಗಾದೆಗಳಲ್ಲಿ ರಾಮಾಯಣ, ಮಹಾಭಾರತ

ರಾಮಾಯಣ, ಮಹಾಭಾರತ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎನ್ನಲು ನಮ್ಮಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳೇ ಸಾಕ್ಷಿ. ಅವುಗಳಲ್ಲಿ ನನಗೆ ತಿಳಿದ ಕೆಲವನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. * ’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’- ಯಾರೇ ಅಧಿಕಾರಕ್ಕೆ ಬಂದರೂ, ಜನಸಾಮಾನ್ಯರ ಬದುಕಿನ ಮೇಲೆ ಏನೂ ಪರಿಣಾಮವಾಗದು ಎಂಬುದು ಅಂದಿಗೂ-ಇಂದಿಗೂ ನಿಜವೇ. *’ರಾವಣನ ಹೊಟ್ಟೆಗೆ ಮೂರು Read More

ಅವನು ಒಳ್ಳೆಯವನು!

ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ. ಮದುವೆ ನಿಶ್ಚಯವಾಗಲಿ’ – ಎಂದು ಎದ್ದು ಹೊರನಡೆದ. ಹೆತ್ತವರು ಹಿಗ್ಗಿ ಹೀರೆಕಾಯಾದರು. ನಮ್ಮ Read More

ಮಗುವಿಗೊಂದು ಮಗು!

ಕಳೆದ ಭಾನುವಾರ ಯಾವುದೋ ಶಾಪಿಂಗ್ ಮಾಲಿನಲ್ಲಿದ್ದೆವು. ಇದ್ದಕ್ಕಿದ್ದಂತೆ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಟ್ರೋಲರಿನಲ್ಲಿ ಮಲಗಿದ್ದ ಮಗುವೊಂದು ರಚ್ಚೆ ಹಿಡಿದು ಅಳತೊಡಗಿತು. ಅದರ ಜೊತೆಗೆ ಇದ್ದ ಹೆಂಗಸು ಅದನ್ನು ಸಮಾಧಾನಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು. ಆ ಮಗು ಅವಳ ಉಪಾಯಗಳೊಂದಕ್ಕೂ ಜಪ್ಪೆನ್ನದೆ ಉಸಿರುಗಟ್ಟಿಕೊಂಡು ಕಿರುಚಿ ಅಳುತ್ತಿತ್ತು. ಅತ್ತು ಕೆಂಪುಕೆಂಪಾಗಿದ್ದ ಆ ಮಗುವಿನ ಮುಖವನ್ನು ನೋಡಿದರೆ ಅದು ಹುಟ್ಟಿ Read More

ಮೆದುವಾದ ಚಪಾತಿ ಮಾಡುವುದು ಹೇಗೆ?

ಇಲ್ಲಿ ಮೆದುವಾದ ಚಪಾತಿ ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೀನಿ ಅಂತ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ನಾನು ಮೆದುವಾದ ಚಪಾತಿ ಮಾಡುವುದು ಹೇಗೆ ಎಂದು ನಿಮ್ಮನ್ನೇ ಕೇಳ್ತಾ ಇದೀನಿ! ದಕ್ಷಿಣ ಭಾರತೀಯರು ಅಕ್ಕಿಯನ್ನು ಉಪಯೋಗಿಸುವುದರಲ್ಲಿ ಎಲ್ಲರಿಗಿಂತಲೂ ಮುಂದು. ನಾವೂ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಎಂದು ನಂಬಿದವರು.  ಅನ್ನ ಕಡಿಮೆ ಮಾಡಿ ಎಂದು ಎಲ್ಲರೂ ಹೇಳೋದು Read More

ರಾಗದಲ್ಲಿ ಕನ್ನಡಕ್ಕೂ ಜಾಗ

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ ಉದ್ಭವ, ಕನ್ನಡ ಆಡಿಯೋ, ಮ್ಯುಸಿಕ್ ಇಂಡಿಯಾ ಆಶ್ರಯಿಸುತ್ತಿದ್ದವರಿಗೆ ಈಗ ಕನ್ನಡ ಕೇಳಿ ನಲಿಯಲು Read More