ಕನ್ನಡ ಪದಗಳು – ಜಿ.ಪಿ.ರಾಜರತ್ನಂ

ಕವನ -ಕನ್ನಡ ಪದಗಳು ಕವಿ – ಜಿ. ಪಿ. ರಾಜರತ್ನಂ ಹಾಡು ಕೇಳಿ – ಯೆಂಡ ಯೆಡ್ತಿ ಕನ್ನಡ ಪದಗೊಳ್   ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-   ತಕ್ಕೋ ! ಪದಗಳ್ ಬಾಣ !     |೧| ಭಗವಂತ್ ಏನ್ರ ಬೂಮಿಗ್ ಇಳಿದು   ನನ್ ತಾಕ್ ಬಂದಾಂತ್ ಅನ್ನು Read More

ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?

ಶಿಲ್ಪಾ ಶೆಟ್ಟಿಗಾದ ಅವಮಾನ – ದೇಶಕ್ಕೇ ಅವಮಾನವಾಗಿದ್ದು ಹೇಗೆ?    ಪತ್ರಿಕೆ,ಟಿವಿಗಳು ಭಾರತಕ್ಕೇನೋ ಭಾರೀ ಅವಮಾನವಾಗಿದೆ ಅನ್ನೋ ಹಾಗೆ ಬೊಬ್ಬೆ ಹೊಡೆಯುತ್ತಿದ್ದುದು ನೋಡಿ ನನ್ನನ್ನೂ ಇದೇ ಪ್ರಶ್ನೆ ಕಾಡಿತ್ತು.  ಕನ್ನಡಪ್ರಭದ ಈ ಲೇಖನ ಓದಿದ ಮೇಲೆ ಸಮಾಧಾನವಾಯಿತು. ನೀವೂ ಓದಿ ನೋಡಿ.  ಏನನ್ನಿಸಿತು ಹೇಳಿ . “ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”  ಎಂದು ಕರೆದರೆ ಅದು ರಾಜ್ಯಕ್ಕಾದ ಅವಮಾನ ಎಂದು ಪರಿಗಣಿಸುತ್ತೇವಾ?” – ಲೇಖಕರ  ಈ ಪ್ರಶ್ನೆಯಂತೂ ಬಹಳ ಅರ್ಥಪೂರ್ಣವಾಗಿದೆ. ಲೇಖನದ Read More

ಆತ್ಮಿಕ ಸ್ನಾನ – ಅಂದರೇನು ?

ಆತ್ಮಿಕ ಸ್ನಾನ! ಇತ್ತೀಚೆಗೆ ಒಂದು ಲೇಖನದಲ್ಲಿ ಈ ಪದ ನೋಡಿದೆ. ನಮ್ಮ ಮನೆಯಲ್ಲಿ, ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನದವರೆಗೆ ಒಬ್ಬರಲ್ಲಾ ಒಬ್ಬರು ಬಾವಿ ಕಟ್ಟೆ ಹತ್ತಿರ ದಬದಬ ತಣ್ಣೀರು ಸುರಿದುಕೊಳ್ಳುತ್ತಾ ಮಡಿ ನೀರಿನ ಸ್ನಾನ ಮಾಡುತ್ತಿದ್ದುದು ಗೊತ್ತು. ಇದಾವುದು ಈ ಸ್ನಾನ ? ನನಗಂತೂ ಅರ್ಥವಾಗಲಿಲ್ಲ. ಆತ್ಮಿಕ ಅಂದರೆ ಇದು ಆತ್ಮಕ್ಕೋ,ಆಧ್ಯಾತ್ಮಿಕಕ್ಕೋ ಸಂಬಂಧಿಸಿರಬೇಕೇನೋ ಎಂದುಕೊಂಡೆ. ಕನ್ನಡ ಕಸ್ತೂರಿ, ಬರಹ ನಿಘಂಟುಗಳನ್ನು Read More

ಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪ

ಕವನ – ಮಲ್ಲಿಗೆ ಕವಿ – ಜಿ.ಎಸ್.ಶಿವರುದ್ರಪ್ಪ ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಇಷ್ಟು ಹಚ್ಚನೆ ಹಸುರ ಗಿಡದಿಂ- ದೆಂತು ಮೂಡಿತೋ ಬೆಳ್ಳಗೆ ! ಮೇಲೆ ನಭದಲಿ ನೂರು ತಾರೆಗ- ಳರಳಿ ಮಿರುಗುವ ಮುನ್ನವೆ ಬೆಳ್ಳಿಯೊಂದೇ ಬೆಳಗುವವಂದದಿ ಗಿಡದೊಳೊಂದೇ ಹೂವಿದೆ ಸತ್ವಶೀಲನ ಧ್ಯಾನ ಮೌನವೆ ಅರಳಿ ಬಂದೊಲು ತೋರಿದೆ ! ಒಲವು Read More

ಸಿ.ಬಿ.ಐ.ಶಂಕರ್ – ಗೀತಾಂಜಲಿ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ,ಸಂಗೀತ: ಹಂಸಲೇಖ ಗಾಯಕರು :  ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ ಹಾಡು ಕೇಳಿ ಗೀತಾಂಜಲಿ… ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ ಪುಷ್ಪಾಂಜಲಿ… ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ ಓ ಕನಕಾಂಬರಿ ನೀನು ಬಾರದೆ ಪೂಜೆಗೆ  ಹೂವಿಲ್ಲ ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ| ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು Read More