ಹೇಮಂತ

ಕವಿ – ಎಸ್.ವಿ. ಪರಮೇಶ್ವರ ಭಟ್ಟ ೧ ಹೇಮಂತ ಋತುರಾಜನಿಳೆಗೆ ಬಂದಿಳಿವಂದು ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ. ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ ಕುಸುಮಗಂಧ ತರುವ ಮರುತನಿಲ್ಲ. ೨ ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ ಮೌನದಲಿ ಮನದೆಗೆದು ಮನಮುರಿದು ನಿಂದಿಹವು ಭಾಗ್ಯಹೀನರವೋಲು ದೀನರೆಂದೆನಿಸಿ. ೩ ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ ಸುಯ್ಯೆಲರ Read More

ಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯ

ರಚನೆ : ಗೋಪಾಲದಾಸರು ವಿದ್ಯಾಭೂಷಣ ಪುತ್ತೂರು ನರಸಿಂಹ ನಾಯಕ್ ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ Read More

ಶೆಟ್ಟಿ ಶಗಣಿ ತಿಂದ ಹಾಗೆ….

‘ಶೆಟ್ಟಿ ಶಗಣಿ ತಿಂದ ಹಾಗೆ’ – ಇದು ನಮ್ಮ ಸಂಬಂಧಿಗಳ, ತೀರಾ ಆಪ್ತ ಸ್ನೇಹಿತರ ವಲಯದಲ್ಲಿ ಪ್ರಚಲಿತವಾಗಿರುವ ಒಂದು ತಮಾಷೆಯ ನುಡಿಗಟ್ಟು. , ‘ಬೇಡ ನೋಡು, ಕೊನೆಗೆ ಶೆಟ್ಟಿ ಆಗುತ್ತೀಯಾ…” , ‘ಅಯ್ಯೋ ಎಷ್ಟು ಹೇಳಿದರೂ ಕೇಳಲಿಲ್ಲ, ಕೊನೆಗೆ ನೋಡು, ಶೆಟ್ಟಿ ಶಗಣಿ ತಿಂದ ಹಾಗಾಯ್ತು’ ಎಂದು ಬೇಸ್ತುಬಿದ್ದವರನ್ನು – ನಮ್ಮ ಮಾತಿನಲ್ಲಿಯೇ ಹೇಳುವುದಾದರೆ ಗುಂಡಿಗೆ Read More

ತಕ್ಕಡಿಯಿಂದ ತಂಬೂರಿಯ ತನಕ

ಕವಿ : ಜಿ.ಎಸ್.ಶಿವರುದ್ರಪ್ಪ ಸಂಕಲನ : ನೂರು ಕವಿತೆಗಳು ತಕ್ಕಡಿಯಿಂದ ತಂಬೂರಿಯ ತನಕ ಸಹಧರ್ಮಿಣಿಯ ಮೂಗುತಿಯ ಮಿನುಗು, ತಂಬೂರಿಯಿಂದ ತುಂಬುವತನಕ ಹಾಡಿನ ಮೊಳಗು. ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು ಈ ವ್ಯಾಪಾರಿ. ಗೊತ್ತಾಗಲಿಲ್ಲ ವೈಕುಂಠಕೆ ದಾರಿ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ ಮರುಪ್ರಶ್ನೆ ; ‘ಯಾರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ? Read More

ಎಹೆಸಾನ್ ತೇರಾ ಹೋಗಾ ಮುಝ್ ಪರ್…..

“ಮೈ ಇನ್ ಪರ್ ಕೊಯಿ ಎಹಸಾನ್ ನಹಿ ಕರನಾ, ಬಲ್ ಕೀ ಯೆ ಮುಜ್ ಪರ್ ಎಹಸಾನ್ ಕರ ರಹೆ ಹೈ” – ಝೀ ಟಿವಿಯ ಯಾವುದೋ ಸಿನಿಮಾವೊಂದರ ನಡುವೆ ಮೂಡಿ ಬಂದ ಈ ಸಂಭಾಷಣೆ ನನ್ನ ಮನಸ್ಸನ್ನು ಸೆಳೆಯಿತು. ಈ ಅರ್ಥ ಬರುವ ಸಂಭಾಷಣೆ ಬಹಳಷ್ಟು ಸಲ ಕೇಳಿದ್ದರೂ, ಈ ಬಾರಿ ಮಾತ್ರ ನನಗೆ Read More