ಲಕ್ಷ್ಮೀಕಾಂತ ಬಾರೊ

ಲಕ್ಷ್ಮೀಕಾಂತ ಬಾರೊ ಶುಭ ಲಕ್ಷಣವಂತ ಬಾರೊ||ಪಲ್ಲವಿ|| ಪಕ್ಷಿವಾಹನ ಏರಿದವನೆ ಪಾವನಮೂರ್ತಿ ಬಾರೊ ||ಅನು|| ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೊ ಸಾಧುಸಜ್ಜನ ಸತ್ಯಯೋನಿ ದಾನಿ ನೀನೇ ಬಾರೊ||-೧-|| ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೊ ರೂಢ ಮಾತನಾಡಿ ಸರ್ವರೂಢಿಗೊಡೆಯ ಬಾರೊ ||-೨-|| ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೊ ಪನ್ನಗಶಯನ ಪುರಂದರ ವಿಠಲ ನೀ Read More

ಹರಿಕಥಾಮೃತಸಾರ -01- ಮಂಗಳಾಚರಣ ಸಂಧಿ

ಹರಿಕಥಾಮೃತಸಾರ – ಮಂಗಳಾಚರಣ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರೀರಮಣಿಕರಕಮಲಪೂಜಿತ | ಚಾರುಚರಣಸರೋಜ ಬ್ರಹ್ಮಸ | ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ || ನೀರಜಭವಾಂಡೋದಯಸ್ಥಿತಿ | ಕಾರಣನೆ ಕೈವಲ್ಯದಾಯಕ | ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ || ಜಗದುದರನತಿ ವಿಮಲಗುಣರೂ | Read More

ಹರಿಕಥಾಮೃತಸಾರ – 02 – ಕರುಣಾ ಸಂಧಿ

ಹರಿಕಥಾಮೃತಸಾರ – ಕರುಣಾ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರವಣ ಮನಕಾನಂದವೀವುದು | ಭವಜನಿತ ದುಃಖಗಳ ಕಳೆವುದು | ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು || ಭುವನ ಪಾವನನೆನಿಪ ಲಕ್ಷ್ಮೀ | ಧವನ ಮಂಗಳ ಕಥೆಯ ಪರಮೋ | ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ Read More

ತನುವಿನೊಳಗೆ ಅನುದಿನವಿದ್ದು

ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಪೇಳದೆ ಪೋದೆ ಹಂಸ || ಪ|| ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ ರೂವಾರವೆಂಬ ಒಂಬತ್ತು ಬಾಗಿಲ ದಾಟಿ ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ ಕಾಯಕೆ ಹೇಳದೆ ಹೋಯಿತು ಒಂದು ಮಾತ  ||-1|| ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ ಬಳ್ಳಿ ಕಾಯಿಗಾತು ಫಲವಾಯಿತು ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ Read More

ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ|| ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ|| ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ ಮಂದಗಮನೆ ಎನ್ನ ಮುಂದಕೆ ಕರೆಯೆ ||೧|| ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು ಕರುಣದಿಂದೆನ್ನ ಪೊರೆಯೆ Read More